ಬಸವರಾಜ ಹೊರಟ್ಟಿ ಕಾರು ಅಪಘಾತ ಕಾರಿಗೆ ಡಿಕ್ಕಿಹೊಡೆದ ಬೈಕ್ ಗಂಭೀರವಾಗಿ ಗಾಯ ಗೊಂಡ ಬೈಕ್ ಸವಾರ…..

Suddi Sante Desk

ಹುಬ್ಬಳ್ಳಿ –

ಬಸವರಾಜ ಹೊರಟ್ಟಿ ಕಾರು ಹುಬ್ಬಳ್ಳಿಯಲ್ಲಿ ಅಪಘಾತ ವಾಗಿದ್ದು ಕಾರಿಗೆ ಬೈಕ್ ಡಿಕ್ಕಿಯಾಗಿದ್ದು ತೀವ್ರವಾಗಿ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ದಾಖಲಾಗಿದ್ದಾನೆ ನಗರದ ಬಿವಿಬಿ ಕಾಲೇಜ್ ನಲ್ಲಿ ಈ ಒಂದು ಅಪಘಾತ ವಾಗಿದ್ದು ಕಾರ್ಯಕ್ರಮವೊಂದು ಮುಗಿಸಿಕೊಂಡು ಹೋಗುತ್ತಿದ್ದ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಯವರು.

ಎದುರಿಗೆ ಹೋಗುತ್ತಿದ್ದ ಕಾರಿಗೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಯಾಗಿದ್ದು ಸವದತ್ತಿ ‌ಮೂಲದ ಜೆಸಿಬಿ ಆಪರೇಟರ್ ಕೆಂಚಪ್ಪ ಎಂಬಾತನೇ ಗಾಯಗೊಂಡಿರುವ ಬೈಕ್ ಸವಾರ ನಾಗಿದ್ದು ಅಪಘಾತದಲ್ಲಿ ವಾಹನ ಸವಾರನಿಗೆ ಗಂಭೀರ ಗಾಯಗೊಂಡಿದ್ದು ಸಧ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರ್ಧ ಗಂಟೆಯಾದರೂ ಘಟನಾ ಸ್ಥಳಕ್ಕೆ ಅಂಬ್ಯುಲೆನ್ಸ್ ಬರಲಿಲ್ಲ ಘಟನೆ ನಡೆದ 10 ನಿಮಿಷ ಸ್ಥಳದಲ್ಲಿದ್ದ ಹೊರಟ್ಟಿ ಯವರು‌‌‌‌.

ನಂತರ ಅಲ್ಲಿಂದ ಬೇರೆ ವಾಹನ ತರಿಸಿ ಹೊರಟರು ಬಸವರಾಜ ಹೊರಟ್ಟಿಯವರು.ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು ಇತ್ತ ತೀವ್ರವಾಗಿ ಗಾಯಗೊಂಡಿರುವ ಬೈಕ್ ಸವಾರ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತಿದ್ದಾನೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.