ಷಡಕ್ಷಾರಿ ಅವರ ಸಭೆಗೆ ಬೆಂಬಲ ನೀಡಿದ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದವರು – ಚೌಡಪ್ಪ ನೇತೃತ್ವದಲ್ಲಿ ಬೆಂಗಳೂರಿ ನತ್ತ ಟೀಮ್…..

Suddi Sante Desk

ಬೆಂಗಳೂರು –

ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ.ಇವರ ಈ ಒಂದು ಸಭೆಗೆ ಈಗಾಗಲೇ ರಾಜ್ಯದ ಬಹುತೇಕ ಶಿಕ್ಷಕರು ಬೆಂಬಲವನ್ನು ನೀಡಿ ಬೆಂಗಳೂರಿಗೆ ಆಗಮಿಸಿದ್ದು ಇನ್ನೂ ಷಡಕ್ಷಾರಿ ಅವರಿಗೆ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದವರು ಬೆಂಬಲ ನೀಡಿದ್ದಾರೆ

ಹೌದು ರಾಜ್ಯ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲಾ ತಾಲ್ಲೂಕು ಸಂಘದ ಅಧ್ಯಕ್ಷರು,ಪದಾಧಿಕಾರಿಗಳು ಮತ್ತು ಸದಸ್ಯರು ಬೆಂಗಳೂರಿನತ್ತ ಬರುತ್ತಿದ್ದಾರೆ.ರಾಜ್ಯಾಧ್ಯಕ್ಷ ಚೌಡಪ್ಪ ನೇತೃತ್ವದಲ್ಲಿ ಬರುತ್ತಿದ್ದಾರೆ

ಭಾನುವಾರ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ರವರು ರಾಜ್ಯದ ಎಲ್ಲಾ ಜಿಲ್ಲೆಗಳ ಎಲ್ಲಾ ತಾಲೂಕುಗಳ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆದಿದ್ದಾರೆ.

ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಕ್ಕೆ ಈ ಸಭೆಗೆ ಆಹ್ವಾನಿಸಿರುವ ಪ್ರಯುಕ್ತ ಆ ಸಭೆಯಲ್ಲಿ ನಮ್ಮ ರಾಜ್ಯ ಸಂಘದ ಎಲ್ಲಾ ಪದಾಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಸಂಘದ ಎಲ್ಲಾ ಅಧ್ಯಕ್ಷರು, ಕಾರ್ಯದರ್ಶಿ & ಪದಾಧಿಕಾರಿಗಳು ಸದರಿ ಸಭೆಯಲ್ಲಿ ಭಾಗವಹಿಸಲು ಅಂದು ದಿನಾಂಕ: 07.11.2021 ರ ಭಾನುವಾರ ಬೆಳಗೆ 10:00 ಗಂಟೆಯೊಳಗೆ ಸರ್ಕಾರಿ ನೌಕರರ ಸಂಘ ಕಬ್ವನ್ ಉದ್ಯಾನ ವನ ಬೆಂಗಳೂರು ಇಲ್ಲಿಗೆ ಆಗಮಿಸಲು ಸಂಘದ ರಾಜ್ಯಾಧ್ಯಕ್ಷರು ಕೋರಿದ್ದಾರೆ
ಧನ್ಯವಾದಗಳು
ಇಂತಿ
ಚೌಡಪ್ಪ ಎಸ್
ರಾಜ್ಯಾಧ್ಯಕ್ಷರು
ಪಿ.ಡಿ.ಕಾಲವಾಡ
ಕಾರ್ಯಾಧ್ಯಕ್ಷರು ಕೆ.ಜೆ.ಚಂದ್ರಶೇಖರ್
ಪ್ರಧಾನ ಕಾರ್ಯದರ್ಶಿ
ಡಿ.ವಿ‌.ಬಾಲರಾಜ್
ಖಜಾಂಚಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.