ಶಿಕ್ಷಕ ಮಹದೇವ ಮೇಲೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ BEO – ರೊಚ್ಚಿಗೆದ್ದ ಪೋಷಕರಿಂದ ಶಿಕ್ಷಕರನ್ನು ಕೂಡಿ ಹಾಕಿದ ಪೋಷಕರು SDMC ಸದಸ್ಯರ ತುರ್ತು ಸಭೆ ನಾಳೆ ಏನೇನಾಗುತ್ತದೆ ಎನೋ…..

Suddi Sante Desk
ಶಿಕ್ಷಕ ಮಹದೇವ ಮೇಲೆ  ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ BEO – ರೊಚ್ಚಿಗೆದ್ದ ಪೋಷಕರಿಂದ ಶಿಕ್ಷಕರನ್ನು ಕೂಡಿ ಹಾಕಿದ ಪೋಷಕರು SDMC ಸದಸ್ಯರ ತುರ್ತು ಸಭೆ ನಾಳೆ ಏನೇನಾಗುತ್ತದೆ ಎನೋ…..

ಮಂಡ್ಯ

ಶಾಲೆಯಲ್ಲಿ ಶಿಕ್ಷಕರನ್ನು ಕೂಡಿ ಹಾಕಿದ ಪೋಷಕರು,ವಿದ್ಯಾರ್ಥಿನಿಯರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರುವ ಶಿಕ್ಷಕ ಮಹದೇವು ವಿರುದ್ದ ಆಕ್ರೋಶ,ಸುದ್ದಿ ತಿಳಿದು ಶಾಲೆಗೆ ಆಗಮಿಸಿ ಪರಸ್ಥಿತಿಯನ್ನು ಆಲಿಸಿದ ಬಿಇಓ ಹೌದು ಇಂತಹದೊಂದು ಘಟನೆಯೊಂದು ಮಂಡ್ಯ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ.

ಮಳವಳ್ಳಿ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ  ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು ವಿದ್ಯಾರ್ಥಿನಿಯರ ಜೊತೆ ಶಿಕ್ಷಕ ಅಸಭ್ಯವಾಗಿ ವರ್ತನೆಯನ್ನು ಮಾಡಿದ ಆರೋಪದಿಂದ ಪೋಷಕರು ಶಾಲೆಗೆ ಆಗಮಿಸಿ ಪ್ರತಿಭಟನೆ ಮಾಡಿದರು.

ವಿದ್ಯಾರ್ಥಿನಿಯರ ಅಂಗಾಗ ಮುಟ್ಟಿ ಲೈಂಗಿಕ ದೌರ್ಜನ್ಯವನ್ನು ಶಿಕ್ಷಕ ಮಹದೇವು ಮಾಡಿದ್ದಾ ರಂತೆ.ಕಾಮುಕ ಶಿಕ್ಷಕನ ವರ್ತನೆಗೆ ಶಾಲೆಯ ವಿದ್ಯಾರ್ಥಿನಿಯರು ಬೇಸತ್ತಿದ್ದು ಕಾಮುಕ ಶಿಕ್ಷಕನ ವಿರುದ್ಧ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ವನ್ನು ಕೂಡಾ ಬರೆದಿದ್ದಾರೆ.

 

 

ಪತ್ರ ಬರೆದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ ವಿದ್ಯಾರ್ಥಿನಿಯರು.ಮಂಡ್ಯ ತಾಲೂಕಿನ ಬೇಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ ಈ ಒಂದು ಘಟನೆಯಿಂದಾಗಿ ದಿಢೀರ್ SDMC ಸಭೆಯನ್ನು ಮಾಡಿ ಚರ್ಚೆಯನ್ನು ಕೂಡಾ ಮಾಡಲಾಯಿತು.

ಸಭೆಯಲ್ಲಿ ಕಾಮುಕ ಶಿಕ್ಷಕನ ವಿರುದ್ಧ ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸಿದರು,ರೊಚ್ಚಿಗೆದ್ದ ಪೋಷಕರಿಂದ ಶಿಕ್ಷಕನ ವಿರುದ್ಧ ಆಕ್ರೋಶ ಕೂಡಾ ಕೇಳಿ ಬಂದಿತು ದೊತೆಗೆ  ಹಲ್ಲೆಗೆ ಯತ್ನವನ್ನು ಮಾಡಲಾಯಿತು.ಇನ್ನೂ ಈ ಒಂದು ಸುದ್ದಿಯನ್ನು ತಿಳಿದು ಸ್ಥಳಕ್ಕೆ ಬಿಇಓ ಸೌಭಾಗ್ಯ ಭೇಟಿ ನೀಡಿ ಪರಿಶೀಲನೆ ಮಾಡಿದರು ಅಲ್ಲದೇ ಆರೋಪಿ ಶಿಕ್ಷಕನ ಅಮಾನತು ಮಾಡುವಂತೆ ಪೋಷಕರ ಪಟ್ಟು ಹಿಡಿದಿದ್ದು ಮುಂದೇನು ಆಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಮಂಡ್ಯ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.