ರಾಯಣ್ಣನ ಹಬ್ಬಕ್ಕಾಗಿ ಹುಬ್ಬಳ್ಳಿಯಲ್ಲಿ ಬೃಹತ್ ರಕ್ತದಾನ ಶಿಬಿರ – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದಿಂದ ಆಯೋಜನೆ…..

Suddi Sante Desk

ಹುಬ್ಬಳ್ಳಿ –

ಸಾಮಾನ್ಯವಾಗಿ ಸಮಾಜದ ಗಣ್ಯರ ಮಹನೀಯರ ಇಲ್ಲವೇ ಇನ್ನೂ ಬೇರೆ ಯಾರಾದರ ಹುಟ್ಟು ಹಬ್ಬ ಇದೆ ಅಂದರೆ ಸಾಕು ವೇದಿಕೆ ಕಾರ್ಯಕ್ರಮವಾಗಲಿ ಇಲ್ಲವೇ ಇನ್ನೂ ಬೇರೆ ಬೇರೆ ಹತ್ತಾರು ಕಾರ್ಯಕ್ರಮಗಳನ್ನು ಮಾಡೊದನ್ನು ನೊಡಿದ್ದೇವೆ ಕೇಳಿದ್ದೇವಿ ಆದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮವನ್ನು ಮಾಡದೇ ವಿಶೇಷ ವಾದ ರಕ್ತದಾನವನ್ನು ಹುಬ್ಬಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ವೇದಿಕೆಯವರು ಮಾಡತಾ ಇದ್ದಾರೆ.

ಹೌದು ಸಂಸ್ಥಾಪಕ ಅಧ್ಯಕ್ಷರಾದ ಸುರೇಶ ಗೋಕಾಕ ಅವರ ಮಾರ್ಗದರ್ಶನದಲ್ಲಿ ವೇದಿಕೆಯವರು ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷವಾದ ಕಾರ್ಯಕ್ರಮವನ್ನು ಮಾಡುತಿದ್ದು ಅದರಲ್ಲೂ ಈ ಬಾರಿ ಬೃಹತ್ ಪ್ರಮಾಣದಲ್ಲಿ ರಕ್ತದಾನ ಶಿಬಿರ ಮಾಡುವ ಮೂಲಕ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಮಾಡುತ್ತಿದ್ದಾರೆ.

ಹೌದು ಆಗಸ್ಟ್ 7 ರಂದು ನಗರದ ಮೂರು ಸಾವಿರ ಮಠದ ಸಭಾ ಭವನದಲ್ಲಿ ಈ ಒಂದು ರಕ್ತದಾನ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದೆ. ಸಾಮಾನ್ಯವಾಗಿ ತುರ್ತು ಪರಸ್ಥಿತಿ ಸೇರಿದಂತೆ ಆಸ್ಪತ್ರೆಯಲ್ಲಿ ಇಂದು ರಕ್ತ ಸರಿಯಾಗಿ ಸಿಗುತ್ತಿಲ್ಲ ಹೀಗಾಗಿ ಇದನ್ನು ಅರಿತುಕೊಂಡ ಸುರೇಶ ಗೋಕಾಕ ಅವರು ಈ ಒಂದು ವಿಶೇಷವಾದ ಅರ್ಥಪೂರ್ಣ ವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಕ್ಕಳು ಕೂಡಾ ರಕ್ತ ದಾನದ ಕುರಿತು ಜಾಗೃತಿ ಮೂಡಿಸಿದರು

ಇದರೊಂದಿಗೆ ಸಮಾಜಕ್ಕೆ ಏನಾದರೂ ಸಂದೇಶ ನೀಡಿ ನೆರವಾಗಿ ವಿಶೇಷ ವಾಗಿ ಸಂಗೋಳ್ಳಿ ರಾಯಣ್ಣನ ದಿನ ವನ್ನು ಆಚರಿಸಲು ಮುಂದಾಗಿದ್ದು ಇದರೊಂದಿಗೆ ಎಲ್ಲರಿಗೂ ಮಾದರಿಯಾ ಗಲು ಮುಂದಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.