ಹುಬ್ಬಳ್ಳಿಯಲ್ಲಿ ಬೈಕ್ ಅಪಘಾತ ಇಬ್ಬರು ಸ್ಥಳದಲ್ಲೇ ಸಾವು ರೇವಡಿಹಾಳ್ ಕ್ರಾಸ್ ನಲ್ಲಿ ಅವಘಡ ಸ್ಥಳಕ್ಕೆ ಪೊಲೀಸರು…..

Suddi Sante Desk

ಹುಬ್ಬಳ್ಳಿ ಧಾರವಾಡ –

ಬೈಕ್ ಸ್ಕಿಡ್ ಆಗಿ ಬಿದ್ದು ಯುವಕರಿಬ್ಬರು ಸ್ಥಳದಲ್ಲೇ ಮೃತ ಪಟ್ಟ ಘಟನೆ ನಿನ್ನೆ ತಡರಾತ್ರಿ ರೇವಡಿಹಾಳ್ ಕ್ರಾಸ್ ನಲ್ಲಿ ನಡೆದಿದೆ.

ನಗರದ ಅಕ್ಷಯ್ ಪಾರ್ಕ್ ನಿವಾಸಿ ಸಂತೋಷ್ ಹಾಗೂ ಜಯಪ್ರಕಾಶ್ ನಗರ ನಿವಾಸಿ ಥಾಮಸ್ ಸೇರಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಹುಬ್ಬಳ್ಳಿಗೆ ಮರಳಿ ಬರುವ ಸಮಯದಲ್ಲಿ ರೇವಡಿಹಾಳ್ ಕ್ರಾಸ್ ನಲ್ಲಿ ಮಧ್ಯ ರಾತ್ರಿ ಭೀಕರ ಅಪಘಾತ ನಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.

ಅಕ್ಷಯ್ ಪಾರ್ಕ್ ನಿವಾಸಿಯಾಗಿರುವ ಸಂತೋಷ್ ಸಾಫ್ಟ್ ವೇರ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು.ಇನ್ನೂ ಜಯಪ್ರಕಾಶ್ ನಗರ ಥಾಮಸ್ ನಗರದ ಸ್ಟಾರ್ ಹೋಟೇಲ್ ಅಡುಗೆ ಭಟ್ಟನಾಗಿ ಕಾರ್ಯ ನಿರ್ವಹಿಸುತ್ತಿ ದ್ದಾರೆ.

ಸದ್ಯ ಇಬ್ಬರ ಶವ ಕಿಮ್ಸ್ ಶವಾಗಾರಕ್ಕೆ ರವಾನಿಸಿದ್ದು ಉತ್ತರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.