ಕಾಂಗ್ರೇಸ್ ಪಕ್ಷದ ಸೇರಲಿದ್ದಾ ರೆಯೇ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ – ಸೇರ್ಪಡೆಗೆ ಕೈ ಪಕ್ಷದಲ್ಲಿ ಯೇ ವಿರೋಧ…..

Suddi Sante Desk

ಧಾರವಾಡ –

ಮುಖ್ಯಮಂತ್ರಿ ರೇಸ್ ನಲ್ಲಿದ್ದು ಕೊನೆಗೆ ಸಚಿವ ರಾಗುತ್ತಾರೆಂದುಕೊಂಡಿದ್ದ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಕಾಂಗ್ರೇಸ್ ಪಕ್ಷವನ್ನು ಸೇರುತ್ತಿದ್ದಾರಂತೆ. ಹೌದು ಕಾಂಗ್ರೇಸ್ ಪಕ್ಷ ಸೇರತಾರಾ ಶಾಸಕ ಅರವಿಂದ ಬೆಲ್ಲದ ಎನ್ನುವ ಬಿಸಿ ಬಿಸಿ ಮಾತುಗಳು ಚರ್ಚೆ ಈಗ ಹುಬ್ಬಳ್ಳಿ ಧಾರವಾಡ ತುಂಬೆಲ್ಲಾ ಜೋರಾಗಿ ಕೇಳಿ ಬರುತ್ತಿದೆ.

ಅರವಿಂದ ಬೆಲ್ಲದ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು ಮುಖ್ಯಮಂತ್ರಿ ಗಾದೆಯ ರೇಸ್ ನಲ್ಲಿದ್ದು ಇವರು ಕೊನೆಗೆ ಸಚಿವರಾಗುತ್ತಾರೆ ಎಂದುಕೊಳ್ಳಲಾಗಿತ್ತು. ಇವೆರೆಡು ಕೈತಪ್ಪಿದ್ದು ಹೀಗಾಗಿ ಇವರು ಕಾಂಗ್ರೇಸ್ ಪಕ್ಷವನ್ನು ಸೇರುತ್ತಿದ್ದಾರೆ ಎಂಬ ಮಾತುಗಳು ಬೆಂಗಳೂರಿನ ಡಿಕೆಶಿ ಅವರ ಮನೆಯಿಂದ ಹುಬ್ಬಳ್ಳಿ ಧಾರವಾಡ ತುಂಬೆಲ್ಲಾ ಜೋರಾಗಿ ಕೇಳಿ ಬರುತ್ತಿವೆ. ಮುಖ್ಯಮಂತ್ರಿ ರೇಸ್ ನಲ್ಲಿದ್ದು ಅದು ಆಗದೇ ಸಚಿವರಾಗಲಿಲ್ಲ ಹೀಗಾಗಿ ಬೇಸರಗೊಂಡಿರುವ ಇವರು ಹುಬ್ಬಳ್ಳಿ-ಧಾರವಾಡ 74 ರ ಶಾಸಕರು ಕಾಂಗ್ರೆಸ್ ಗೆ ಸೇರುತ್ತಿದ್ದಾರೆ. ಹೀಗಾಗಿ ಶಾಸಕರ ಸೇರ್ಪಡೆ ಗೆ ಕಾಂಗ್ರೆಸ್ ನಲ್ಲಿಯೇ ಆರಂಭದಲ್ಲಿಯೇ ಸಾಕಷ್ಟು ವಿರೋಧ ಕೇಳಿ ಬರುತ್ತಿದೆ.

ಕೈ ಕಾರ್ಯ ಕರ್ತರಿಂದ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು ಧಾರವಾಡ 74 ರ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಸೇರ್ತಾರಾ ಕಾಂಗ್ರೆಸ್ ಎಂಬ ಗುಮಾನಿಯ ಮಾತುಗಳು ಹರಡಿದ್ದು ಡಿಕೆಶಿ ಅವರನ್ನು ಬೆಂಗಳೂರಿನಲ್ಲಿ ಬೆಲ್ಲದ ಭೇಟಿ ಮಾಡಿದ್ದಾರಂತೆ.ಇನ್ನೂ ನವಲಗುಂದ ಮಾಜಿ ಶಾಸಕ ಎನ್.ಎಚ್ ಕೋನರಡ್ಡಿ ಕಾಂಗ್ರೆಸ್ ಸೇರ್ಪಡೆ ಖಚಿತವಾಗಿದ್ದು ಇದನ್ನು ಸ್ವಾಗತ ಮಾಡಿದ್ದು ಜೆಡಿಎಸ್ ಬಿಜೆಪಿ ಶಾಸಕರು ಕೈ ಮುಖಂಡರ ಭೇಟಿ ಮಾಡಿರೋ ಹಿನ್ನೆಲೆ.ಧಾರವಾಡ ಕಾಂಗ್ರೆಸ್ ಕಾರ್ಯ ಕರ್ತರಲ್ಲಿ ಅಸಮಾಧಾನ ಕಂಡು ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ತೋರುತ್ತಿದ್ದಾರೆ ಕೈ ಪಡೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.