ಗರಗ ದಲ್ಲಿ ಬಿಜೆಪಿ ಯ SC,ST ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಾಕಾರಣಿ ಸಭೆ

Suddi Sante Desk

ಧಾರವಾಡ –

ಗರಗ ಮಡಿವಾಳೇಶ್ವರ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಕ್ಷದ ಧಾರವಾಡದ ಎಸ್ಸಿ ಹಾಗೂ ಎಸ್ಟಿ ಮೋರ್ಚಾ ಪದಾಧಿಕಾರಿಗಳ ಪದ ಗ್ರಹಣ ಹಾಗೂ ಕಾರ್ಯಕಾರಣಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು

ಸಸಿಗೆ ನೀರೆರೆಯುವ ಮೂಲಕ ಜನಪ್ರಿಯ ಶಾಸಕ ರಾದ ಅಮೃತ ದೇಸಾಯಿ ಉದ್ಘಾಟಿಸಿದರು ಇದೇ ವೇಳೆ ಮಾತನಾಡಿದ ಅವರು ಪಕ್ಷದ ಸಂಘಟನೆ ಮತ್ತು ಇತರೆ ವಿಚಾರಗಳ ಕುರಿತು ಕಾರ್ಯ ನಿರ್ವಹಣೆ ಮಾಡುವ ಕುರಿತು ಕರೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ಮಂಡಳದ ಅಧ್ಯಕ್ಷರಾದ ರುದ್ರಪ್ಪ ಅರಿವಾಳ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ ವಹಿಸಿಕೊಂಡಿದ್ದರು.

ಇನ್ನೂ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಗಳಾದ ರಾಜಕುಮಾರ್ ಬಸವಾ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಮಹೇಶ್ ತೊಗಲಂಗಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಮ್ಯಾಗಿನಮನಿ ತಾಲ್ಲೂಕು ಅಧ್ಯಕ್ಷರಾದ ಸಂಗಮೇಶ ಮಾದರ ಎಸ್ಟಿ ಮೋರ್ಚಾ ತಾಲ್ಲೂಕು ಅಧ್ಯಕ್ಷರಾದ ವಿಠಲ್ ಪೂಜಾರ,ಕಲ್ಮೇಶ ಹಾದಿಮನಿ, ಸಂಭಾಜಿ ಜಾಧವ ಗಿಡ್ಡಪ್ಪ ಶಿವಳ್ಳಿ, ಮಲ್ಲಪ್ಪ ಹಳಕಟ್ಟಿ ಹಾಗೂ ಪ್ರಮುಖರು ಎಸ್ಸಿ ಹಾಗೂ ಎಸ್ಟಿ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.