ದಸರಾ ರಜೆಯ ಮೋಜಿನಲ್ಲಿ ಪ್ರಾಣ ಕಳೆದುಕೊಂಡ ಬಾಲಕರು – ಈಜಲು ಹೋಗಿ ನೀರು ಪಾಲಾದ ಇಬ್ಬರು ವಿದ್ಯಾರ್ಥಿಗಳು ಒರ್ವ ಬಾಲಕ ಪಾರು

Suddi Sante Desk
ದಸರಾ ರಜೆಯ ಮೋಜಿನಲ್ಲಿ ಪ್ರಾಣ ಕಳೆದುಕೊಂಡ ಬಾಲಕರು – ಈಜಲು ಹೋಗಿ ನೀರು ಪಾಲಾದ ಇಬ್ಬರು ವಿದ್ಯಾರ್ಥಿಗಳು ಒರ್ವ ಬಾಲಕ ಪಾರು

ಹಾಸನ

 

ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಪ್ರಾಣವನ್ನು ಕಳೆದುಕೊಂಡಿರುವ ಘಟನೆ ಹಾಸನ ದಲ್ಲಿ ನಡೆದಿದೆ.ಹೌದು ದಸರಾ ರಜೆಯ ಖುಷಿ ಯಲ್ಲಿ ಮೋಜಿಗಿಳಿದ ಮೂವರು ಬಾಲಕರ ಪೈಕಿ ಇಬ್ಬರು ಬಾಲಕರು ಪ್ರಾಣ ಕಳೆದುಕೊಂಡಿದ್ದು ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಹಾಸನ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

 

ಸಾಣೇನಹಳ್ಳಿ ಗ್ರಾಮದ ಸುಧಾಕರ್ ಎಂಬುವರ ಪುತ್ರ ಆಕಾಶ್ ಹಾಗೂ ಶ್ರೀನಿವಾಸ್ ಎಂಬುವರ ಪುತ್ರ ಲೋಕೇಶ್ ಸಾವಿಗೀಡಾದ ಬಾಲಕರಾಗಿ ದ್ದಾರೆ.ಚನ್ನರಾಯಪಟ್ಟಣ ತಾಲೂಕಿನ ಮಂಜು ನಾಥಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ ಶಾಲೆಗೆ ದಸರಾ ರಜೆ ಇದ್ದ ಕಾರಣ ಮೂವರು ಬಾಲಕರು ಮಂಜುನಾಥಪುರ ಗ್ರಾಮದ ಸಮೀಪ ವಿದ್ದ ಕೆರೆಗೆ ಈಜಲು ತೆರಳಿದ್ದರು. ಈಜು ಬರದಿದ್ದ ರೂ ಕೆರೆಗೆ ಇಳಿದಿದ್ದರಿಂದ ಅನಾಹುತ ಸಂಭವಿ ಸಿದೆ ಮೂವರಲ್ಲಿ ಇಬ್ಬರು ಸಾವಿಗೀಡಾಗಿದ್ದು, ಇನ್ನೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಈ ಒಂದು ಸುದ್ದಿ ತಿಳಿದ ಶ್ರವಣ ಬೆಳಗೊಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.