ಸುಟ್ಟು ಕರಕಲಾದ ಬಣವೆಗಳು – ಕಂಗಾಲಾದ ರೈತ

Suddi Sante Desk

ಧಾರವಾಡ –

ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಹೊಟ್ಟು ಬೆಂಕಿಗೆ ಆಹುತಿಯಾದ ಘಟನೆ ಧಾರವಾಡ ತಾಲೂಕಿನ ಪುಡಕಲಕಟ್ಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಗಂಗಪ್ಪ ಮಡಿವಾಳರ ಎಂಬುವವರಿಗೆ ಸೇರಿದ ಹೊಟ್ಟಿನ ಬಣವೆಯೇ ಬೆಂಕಿಗೆ ಆಹುತಿಯಾಗಿದೆ. ಇದರ ಜೊತೆಗೆ ಅಲ್ಲೇ ಇದ್ದ ಕಟ್ಟಿಗೆ ಚಕ್ಕಡಿ, ಕ್ರಿಮಿನಾಶಕ ಸಿಂಪಡಿಸುವ ಪಂಪ್ ಕೂಡ ಬೆಂಕಿಗೆ ಆಹುತಿಯಾಗಿವೆ.

ಕಳೆದ ವರ್ಷ ಕೂಡ ಗಂಗಪ್ಪ ಅವರ ಬಣವೆಗಳು ಬೆಂಕಿಗೆ ಆಹುತಿಯಾಗಿದ್ದವು. ಆದರೆ, ಯಾವುದೇ ಪರಿಹಾರ ಬಂದಿರಲಿಲ್ಲ. ನಿನ್ನೆಯೂ ಕೂಡ ತಡರಾತ್ರಿ ಬಣವೆಗಳಿಗೆ ಬೆಂಕಿ ಬಿದ್ದಿದ್ದು 15 ಟ್ರ್ಯಾಕ್ಟರ್ ನಷ್ಟು ಹೊಟ್ಟು ಸುಟ್ಟು ಹೋಗಿದ್ದು, ದನಗಳಿಗೆ ಮೇವು ಇಲ್ಲದಂತಾಯಿತು ಎಂದು ರೈತ ಗಂಗಪ್ಪ ಕಂಗಾಲಾಗಿದ್ದಾನೆ.

ತಡರಾತ್ರಿ ಬೆಂಕಿ ಬಿದ್ದಿದ್ದರಿಂದ ಯಾರಿಗೂ ಗೊತ್ತಾಗಿಲ್ಲ ಬೆಳಗಾಗುವಷ್ಟರಲ್ಲೇ ಬಣವೆಗಳು ಸುಟ್ಟು ಕರಕಲಾಗಿದ್ದವು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.