ಉಕ್ರೇನ್ ನಿಂದ ಹುಬ್ಬಳ್ಳಿಗೆ ಆಗಮಿಸಿದ ಕುಂದಗೋಳ ದ ಚೈತ್ರಾ ಸಂಶಿ CM ಸ್ವಾಗತ – ವಿಮಾನ ನಿಲ್ದಾಣ ದಲ್ಲಿ ಸಿಹಿ ತಿನ್ನಿಸಿ ಅಲ್ಲಿನ ಪರಿಸ್ಥಿತಿ ಆಲಿಸಿದ ನಾಡ ದೊರೆ…..

Suddi Sante Desk

ಹುಬ್ಬಳ್ಳಿ –

ಧಾರವಾಡ ಜಿಲ್ಲೆಯ ಕುಂದಗೋಳ ದ ಚೈತ್ರಾ ಸಂಶಿ ವಿದ್ಯಾರ್ಥಿನಿ ಹುಬ್ಬಳ್ಳಿ ಗೆ ಆಗಮಿಸಿದ್ದಾರೆ.ಹೌದು ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಚೈತ್ರಾ ಇಂದು ಹುಬ್ಬಳ್ಳಿ ಗೆ ಇವರ ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಿ ಬರಮಾಡಿಕೊಂಡರು

ಉಕ್ರೇನ್ ನಲ್ಲಿ ಸಿಲುಕಿದ್ದ ಚೈತ್ರಾ ಸಂಶಿ ಎನ್ನುವ ವಿದ್ಯಾರ್ಥಿನಿ.ಚೈತ್ರಾ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವಿದ್ಯಾರ್ಥಿನಿಯಾಗಿದ್ದು.ವಿಮಾನ ನಿಲ್ದಾಣದಲ್ಲಿ ಹೂ ಗುಚ್ಛವನ್ನು ನೀಡಿ ವಿದ್ಯಾರ್ಥಿನಿಯನ್ನು ಸ್ವಾಗತಿಸಿದರು ಸಿಎಂ ಮತ್ತು ಜಿಲ್ಲೆಯ ಅಧಿಕಾರಿಗಳು.ಚೈತ್ರಾ ಅಲ್ಲಿ 3 ನೇ ವರ್ಷದ ಮೆಡಿಕಲ್ ಓದುತ್ತಿದ್ದಾಳೆ.ಇದೇ ವೇಳೆ ಮಾತನಾಡಿ ಅಲ್ಲಿ ಬಹಳಷ್ಟನ್ನು ಜನ ವಿದ್ಯಾರ್ಥಿನಿಯರು ಸಿಲುಕಿದ್ದಾರೆ ಅಲ್ಲಿಂದ 4-5 ಕಿಮೀ ರಸ್ತೆಯ ಮೂಲಕ ನಡೆದುಕೊಂಡು ಬಂದಿದ್ದೇವೆ ಎಂದರು.

ಚೈತ್ರಾ ಅಲ್ಲಿಯ ಬಂಕರ್ ನಲ್ಲಿ ಸಿಲುಕಿದ್ದರು‌.ಅಲ್ಲಿಂದ ರಾಯಭಾರಿ ಕಚೇರಿ ಸಹ ಬಹಳ ಸಪೋರ್ಟ್ ಮಾಡಿ ಕರೆದುಕೊಂಡು ಬಂದಿದೆ.ಅವರ ಕುಟುಂಬ ತುಂಬಾ ಭಯಗೊಂಡಿದ್ರು.ಇನ್ನೂ ಇದೆ ವೇಳೆ ಮುಖ್ಯಮಂತ್ರಿ ಮಾತನಾಡಿ ಮೋದಿಯವರು ಸಹ ಸ್ವತಃ ಅವರೇ ಮಾನಿಟರ್ ಮಾಡ್ತಿದ್ದಾರೆ.ಬಹಳ ದೊಡ್ಡ ಪ್ರಮಾಣದಲ್ಲಿ ಏರ್ ಲಿಫ್ಟ್ ಕಾರ್ಯ ಆಗುತ್ತಿದೆ.4-5 ರಾಷ್ಟ್ರಗಳೊಂದಿಗೆ ಮೋದಿಯವರು ಬಹಳ ಉತ್ತಮ ಸಂಬಂಧ ಹೊಂದಿದ್ದಾರೆ ಜೊತೆಗೆ ಅಲ್ಲದೇ ನವೀನ್ ಮೃತ ದೇಹವನ್ನ ಸಹ ಕರೆತ ರುವ ಕಾರ್ಯ ನಡೆಯುತ್ತಿದೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.