ವಯೋವೃದ್ದೆಯ ಮೇಲೆ ಚಿರತೆ ದಾಳಿ – ಧೈರ್ಯ ದಿಂದ ಬಡಿದು ಓಡಿಸಿದರು ಚಿರತೆಯನ್ನು ಸಿಸಿ ಟಿವಿ ಯಲ್ಲಿ ಸೆರೆಯಾಯಿತು ಅಜ್ಜಿಯ ಸಾಹಸ…..

Suddi Sante Desk

ಮುಂಬಯಿ –

ಮಧ್ಯರಾತ್ರಿ ವಯೋ ವೃದ್ದ ಅಜ್ಜಿಯೊಬ್ಬರು ಮನೆಯಿಂದ ಹೊರಗಡೆ ವಿಶ್ರಾಂತಿ ಗಾಗಿ ಬಂದಿದ್ದು ಈ ಒಂದು ಸಮಯದಲ್ಲಿ ಚಿರತೆ ದಾಳಿ ಮಾಡಿದ್ದು ಮರೆ ಬಿಟ್ಟು ಕುಳಿತುಕೊಂಡಿದ್ದ ಅಜ್ಜಿ ಧೈರ್ಯ ದಿಂದ ಅದನ್ನು ಓಡಿಸಿ ಪ್ರಾಣ ಉಳಿಸಿಕೊಂಡಿದ್ದಾರೆ

ಹೌದು ಮುಂಬೈನ ಆರೆ ಪ್ರದೇಶದಲ್ಲಿ ಈ ಒಂದು ದೃಶ್ಯ ಕಂಡು ಬಂದಿದೆ.ಇಲ್ಲಿ ಚಿರತೆ ಮತ್ತೊಮ್ಮೆ ಸಂಚಲನ ಮೂಡಿಸಿದೆ.ಬುಧವಾರ ಸಂಜೆ ಚಿರತೆ ಮನೆಯ ಆವರಣದಲ್ಲಿ ಕುಳಿತಿದ್ದ ವೃದ್ಧೆಯ ಮೇಲೆ ದಾಳಿ ಮಾಡಿದೆ.

ಇಡೀ ಘಟನೆಯು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.ಘಟನೆಯಲ್ಲಿ ವಯೋ ವೃದ್ದ ಮಹಿಳೆ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಪ್ರದೇಶದಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದ ನಂತರ ಇದು ಎರಡನೇ ಘಟನೆಯಾಗಿದೆ.ಇನ್ನೂ ಈ ಪ್ರದೇಶದ ನಿವಾಸಿಗಳು ಭಯಭೀತರಾಗಿದ್ದಾರೆ.ಆದರೆ ಇದೇ ವಿಡಿಯೋ ವನ್ನು ಮುಂದಿಟ್ಟುಕೊಂಡು ಧಾರವಾಡದ ಕುಂದಗೋಳ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ಸಧ್ಯ ಕಾಣಿಸಿಕೊಂಡ ಚಿರತೆಗೆ ಹೋಲಿಕೆ ಮಾಡಿಸು ತ್ತಿದ್ದಾರೆ.ಇದೊಂದು ನಕಲಿ ವಿಡಿಯೋ ಆಗಿದ್ದು ಇದು ಮುಂಬಯಿ ನಲ್ಲಿ ಕಂಡು ಬಂದ ದೃಶ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕ ರಲ್ಲಿ ತಿಳಿ ಹೇಳಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.