ಸರ್ಕಾರಿ ನೌಕರರಿಗೆ OPS ಆರಂಭ ಮತ್ತೊಂದು ಹೊಸ ಯೋಜನೆ ಪ್ರಾರಂಭಿಸಿ ನೌಕರರಿಗೆ ನೆರವಾಯಿತು ಛತ್ತೀಸ್ ಗಡ ಸರ್ಕಾರ…..

Suddi Sante Desk

ರಾಯಪುರ –

ನಿವೃತ್ತ ಸರ್ಕಾರಿ ಉದ್ಯೋಗಿಗಳಿಗೆ ಆದಾಯ ಕಲ್ಪಿಸುವ ನಿಟ್ಟಿನಲ್ಲಿ ಛತ್ತೀಸ್ ಗಢ ರಾಜ್ಯ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಿದ್ದು ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ರಾಷ್ಟ್ರೀಯ ಪಿಂಚಣಿ ಯೋಜನೆಯಡಿ 17,000 ಕೋಟಿ ರೂ.ಗಳನ್ನು ನವೆಂಬರ್ 2004 ರಿಂದ ಹಿಂಪಡೆಯಲು ನಿರ್ಧರಿಸಿರುವ ರಾಜ್ಯ ಸರ್ಕಾರವು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ.

ಈ ನಿರ್ಧಾರದಿಂದ ಹಳೆಯ ಪಿಂಚಣಿ ಯೋಜನೆಯು ನೌಕರರ ವೇತನದ 50 ಪ್ರತಿಶತವನ್ನು ಪಿಂಚಣಿಯಾಗಿ ನೀಡುತ್ತದೆ.ಹಳೆಯ ಪಿಂಚಣಿ ಯೋಜನೆಯು ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಅಧಿ ಸೂಚನೆಯನ್ನು ಹೊರಡಿಸಿದೆ.ಅಲ್ಲದೆ, ಹೊಸ ಪಿಂಚಣಿ ಯೋಜನೆ ಹಿನ್ನೆಲೆ ಸರ್ಕಾರಿ ನೌಕರರ ವೇತನದಿಂದ ಮಾಸಿ ಕವಾಗಿ 10%ರಷ್ಟು ಕಡಿತಗೊಳ್ಳುತ್ತಿದ್ದ ತೆರಿಗೆಯನ್ನು ಏಪ್ರಿಲ್ 1 ರಿಂದ ರದ್ದುಗೊಳಿಸಲಾಗುವುದು ಎಂದು ಹೇಳಿದೆ.ಸಾಮಾನ್ಯ ಭವಿಷ್ಯ ನಿಧಿ ನಿಯಮದ ಪ್ರಕಾರ ಮೂಲ ವೇತನದ ಕನಿಷ್ಠ 12 ಪ್ರತಿಶತವನ್ನು ಕಡಿತಗೊಳಿಸ ಲಾಗುತ್ತದೆ.ಇದೇ ರೀತಿಯಾದ ರಾಜಸ್ಥಾನ ಸರ್ಕಾರದ ಮನವಿಯನ್ನು ಕೇಂದ್ರ ತಿರಸ್ಕರಿಸಿತ್ತು.ರಾಜಸ್ಥಾನ ಸರ್ಕಾ ರವು 2004 ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ 39,000 ಕೋಟಿ ರೂ.ಗಳನ್ನು ಹಿಂಪಡೆದು ಸಾಮಾನ್ಯ ಭವಿಷ್ಯ ನಿಧಿಯ ಅಡಿಯಲ್ಲಿ ವರ್ಗಾಯಿಸುವುದಾಗಿ ಹೇಳಿತ್ತು.ಆದ್ದರಿಂದ ಕೇಂದ್ರ ಮಾನ್ಯತೆ ನೀಡಿರಲಿಲ್ಲ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.