ಧಾರವಾಡ –
ಅನ್ನದಾತನ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಬೆಳೆಗಳಿಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರಕಾರವು ಹಿಂಗಾರು ಹಂಗಾಮಿನ ಕಡಲೆಯನ್ನು ಪ್ರತಿ ಕ್ವಿಂಟಾಲಿಗೆ ರೂ.5100/-ಗಳ ಬೆಂಬಲ ಬೆಲೆಯಂತೆ ಒಟ್ಟು 1,67,000 ಮೆಟ್ರಿಕ್ ಟನ್ ಖರೀದಿ ಮಾಡಲು ನಿರ್ಧರಿಸಿದ್ದು, ಪ್ರತಿ ಎಕರೆಗೆ 4 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಖರೀದಿಗೆ ನಿಗದಿಪಡಿಸಲಾಗಿದೆ.

ಕಡಲೆ ಖರೀದಿಗೆ ನೋಂದಣಿ ದಿನಾಂಕ :
15/02/2021 ರಿಂದ 29/04/2021 ರ ವರೆಗೆ
ಕಡಲೆ ಖರೀದಿಯ ದಿನಾಂಕ :
15/02/2021 ರಿಂದ 14/05/2021 ರ ವರೆಗೆ
ಸಮಸ್ತ ರೈತ ಬಾಂಧವರು ಪ್ರಸಕ್ತ ವರ್ಷದ ಕಡಲೆ ಖರೀದಿ ಯೋಜನೆಯ ಸದುಪಯೋಗವನ್ನು ಪಡೆದುಕೂಳ್ಳಲು ವಿನಂತಿಯನ್ನು ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕರು ರೈತರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.