ಬೆಳಗಾವಿ –
ಮಹಾಮಾರಿ ಕೋವಿಡ್ ನ ನಡುವೆಯೂ ಗಡಿನಾಡು ಬೆಳಗಾವಿಯಲ್ಲಿ ನಡೆಯುತ್ತದೆ ಇಲ್ಲ ಎಂಬ ಅನುಮಾನದ ನಡುವೆಯೂ ಕೂಡಾ ಚಳಿಗಾಲದ ಅಧಿವೇಶನ ನಡೆಯು ತ್ತಿದೆ.ಡಿಸೆಂಬರ್ 13 ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯಲಿದ್ದು ಇದಕ್ಕಾಗಿ ಎಲ್ಲಾ ಸಿದ್ದತೆಗಳು ನಡೆಯುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿವೇಶನದಲ್ಲಿ ಪಾಲ್ಗೊಳ್ಳಲಿರುವ ಶಾಸಕರಿಗೆ ಹಲವು ಸೌಲಭ್ಯಗಳನ್ನು ಕಡಿತಗೊಳಿಸಿ ಶಾಕ್ ನೀಡಿದ್ದಾರೆ.ಹೌದು ಬೆಳಗಾವಿಯಲ್ಲಿ ಡಿಸೆಂಬರ್ 13 ರಿಂದ ಅಧಿವೇಶನ ನಡೆಯಲಿದ್ದು ಅಧಿವೇಶನದಲ್ಲಿ ಪಾಲ್ಗೊಳ್ಳುವ ಶಾಸಕರಿಗೆ ಹಲವು ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ.
ಶಾಸಕರ ಆಪ್ತ ಕಾರ್ಯದರ್ಶಿ ಚಾಲಕ ಸೇರಿದಂತೆ ಅವರ ಹಿಂಬಾಲಕರಿಗೆ ವಸತಿ ಸೌಲಭ್ಯಗಳನ್ನು ಮಾಡಿಲ್ಲ ಹಾಗೇ ಶಾಸಕರು ರಾತ್ರಿ ಊಟದ ವ್ಯವಸ್ಥೆಯನ್ನು ಅವರೇ ಮಾಡಿ ಕೊಳ್ಳಬೇಕು ಎಂದು ಶಾಸಕರಿಗೆ ವಿಧಾನಸಭೆ ಕಾರ್ಯ ದರ್ಶಿ ಎಂ.ಕೆ. ವಿಶಾಲಾಕ್ಷಿ ಮಾಹಿತಿ ನೀಡಿದ್ದಾರೆ.ಬೆಳಗಾವಿ ಅಧಿವೇಶನದ ಅವಧಿಯಲ್ಲಿ ಬೆಳಗಿನ ಉಪಹಾರವನ್ನು ವಾಸ್ತವ್ಯ ಹೂಡಿರುವ ಹೋಟೆಲ್, ಸುವರ್ಣಸೌಧದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ.ರಾತ್ರಿ ಊಟದ ವ್ಯವಸ್ಥೆಯನ್ನು ಈ ಹಿಂದಿನಂತೆ ತಮ್ಮ ಹಂತದ ಲ್ಲಿಯೇ ಮಾಡಿಕೊಳ್ಳಬೇಕು ಎಂಬ ಮಾಹಿತಿ ನೀಡಲಾಗಿದೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಶಾಸಕರ ಆಪ್ತ ಸಹಾಯ ಕರು,ವಾಹನ ಚಾಲಕರಿಗೆ ವಸತಿ ಹಾಗೂ ಸಾರಿಗೆ ಸೌಕ ರ್ಯದ ಜವಾಬ್ದಾರಿಯನ್ನು ಆಯಾ ಶಾಸಕರಿಗೆ ನೀಡಲಾ ಗಿದೆ.ಸಚಿವಾಲಯದ ಅಧಿಕಾರಿಗಳ ತಂಡ ಬೆಳಗಾವಿಗೆ ಸ್ಥಳಾಂತರವಾಗಿದ್ದು, ಪೂರ್ವ ಸಿದ್ಧತೆಗಳನ್ನು ಪಾರಂಭಿಸ ಲಾಗಿದೆ.