CM ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಇನ್ನೂ ನೆನಪು ಮಾತ್ರ – ಧಾರವಾಡ ಜಿಲ್ಲಾ ಮಾಧ್ಯಮ ಮಿತ್ರರು ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಪತ್ರಕರ್ತ ಬಂಧು ಗಳಿಂದ ಭಾವಪೂರ್ಣ ನಮನ ಸಂತಾಪ…..

Suddi Sante Desk

ಬೆಂಗಳೂರು –

ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ನಿಧನರಾಗಿದ್ದಾರೆ.ಹೌದು ನಿನ್ನೇಯಷ್ಟೇ ಹಾವೇರಿ ಕಾರ್ಯಕ್ರಮಕ್ಕೆ ಆಗಮಿಸಿ ಮರಳಿ ಬೆಂಗಳೂರಿಗೆ ಹೋಗಿ ಎಂದಿನಂತೆ ಬೆಳಿಗ್ಗೆ ಜಿಮ್ ಗೆ ವರ್ಕೌಟ್ ಮಾಡಲು ಹೋಗಿದ್ದ ಸಮಯದಲ್ಲಿ ಕುಸಿದು ಬಿದ್ದಿದ್ದಾರೆ ಕೂಡಲೇ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ ಆದರೂ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರು ಇದ್ದಾಗ ಮಾಧ್ಯಮ ಸಲಹೆಗಾರ ರಾಗಿದ್ದು ಸಧ್ಯ ಮುಖ್ಯಮಂತ್ರಿ ಯಾಗಿರುವ ಇವರಿಗೆ ಮಾಧ್ಯಮ ಸಂಯೋಜಕರಾಗಿ ಕಳೆ ದೊಂದು ವರ್ಷದಿಂದ ಕೆಲಸ ಮಾಡುತ್ತಿದ್ದರು ಇಂದು ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದಿರುವ ಗುರುಲಿಂಗ ಸ್ವಾಮಿ ಹೊಳಿಮಠ(40) ಹೃದಯಾಘಾತ ದಿಂದ ಬೆಳಿಗ್ಗೆ ನಿಧನರಾದರು.

ಬೆಳಿಗ್ಗೆ ಜಿಮ್‌ಗೆ ಹೋಗಿದ್ದ ಅವರು ಕುಸಿದುಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನ ಆಗಲಿಲ್ಲ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಿವಾಸಿ ಯಾಗಿರುವ ಇವರು ಧಾರವಾಡದ ಕರ್ನಾಟಕ ವಿವಿ ಯಲ್ಲಿ ಪತ್ರಿಕೋದ್ಯಮ ಪದವಿ ಮುಗಿಸಿ ನಂತರ ಹತ್ತು ಹನ್ನೆರಡು ವರ್ಷಗಳ ಕಾಲ ಈಟಿವಿ ಹುಬ್ಬಳ್ಳಿ ಬೆಂಗಳೂರಿನಲ್ಲಿ ವರದಿಗಾರರಾಗಿ,ನಂತರ ಬೆಂಗಳೂರಿನಲ್ಲಿ ವಿಜಯವಾಣಿ ಯ ರಾಜಕೀಯ ಹಿರಿಯ ವರದಿಗಾರರಾಗಿ ಅಲ್ಲಿಂದ Tv5 ನಲ್ಲಿ ರಾಜಕೀಯ ಮುಖ್ಯಸ್ಥರಾಗಿ ನಂತರ ಗೃಹ ಸಚಿವ ರಾದ ಬೊಮ್ಮಾಯಿ ಯವರಿಗೆ ಮಾಧ್ಯಮ ಸಲಹೆಗಾರ ರಾಗಿ ಸಧ್ಯ ಮುಖ್ಯಮಂತ್ರಿ ಯಾದ ಬಳಿಕ ಅವರಿಗೆ ಮಾಧ್ಯಮ ಸಂಯೋಜಕರಾಗಿ ಕರ್ತವ್ಯ ವನ್ನು ಮಾಡು ತ್ತಿದ್ದಾರೆ‌.ಇವರ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಮಾಧ್ಯಮ ಮಿತ್ರರು ತೀವ್ರವಾದ ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.