ಸಂಗೋಳ್ಳಿ ರಾಯಣ್ಣ ಮೂರ್ತಿ ಭಗ್ನಕ್ಕೆ ಖಂಡನೆ ಧಾರವಾಡ ದಲ್ಲಿ ಪ್ರತಿಭಟನೆ – ಸುರೇಶ ಗೋಕಾಕ ನೇತೃತ್ವದಲ್ಲಿ DC ಕಚೇರಿ ಮುಂದೆ ಹೋರಾಟ ಮನವಿ ಸಲ್ಲಿಕೆ…..

Suddi Sante Desk

ಧಾರವಾಡ –

ಬೆಳಗಾವಿಯಲ್ಲಿ ಸಂಗೋಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದಕ್ಕೆ ರಾಜ್ಯಾದ್ಯಂತ ತೀವ್ರವಾದ ಖಂಡನೆ ವ್ಯಕ್ತವಾಗುತ್ತಿದ್ದು ಇನ್ನೂ ಇತ್ತ ಧಾರವಾಡ ದಲ್ಲಿ ಖಂಡನೆ ಕಂಡು ಬಂದಿದೆ.

ಹೌದು ಈ ಒಂದು ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.ಹೌದು ಧಾರವಾಡದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಈ ಒಂದು ಪ್ರತಿಭಟನೆ ಕಂಡು ಬಂದಿತು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಯನ್ನು ಮಾಡಿದರು.

ರಾಯಣ್ಣ‌ ಮೂರ್ತಿ ಭಗ್ನ ಮಾಡಿದವರಿಗೆ ಗಡಿ ಪಾರು ಮಾಡುವಂತೆ ಆಗ್ರಹ ಕೇಳಿ ಬಂದಿತು.ಎಂ ಇ ಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.ಇದೇ ವೇಳೆ ಜಿಲ್ಲಾಧಿಕಾರಿಗೆ ಮನವಿ ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಲಾಯಿತು.ಈ ಒಂದು ಪ್ರತಿಭಟನೆ ಯಲ್ಲಿ ಸುರೇಶ ಗೋಕಾಕ ಅವರೊಂದಿಗೆ ಪ್ರವೀಣ ಗೋಕಾವಿ, ಯಲ್ಪಪ್ಪ ಅಂಬಿಗೇರ,ರಾಮು ದಳವಿ,ದುರ್ಗೇಶ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.