ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ – ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭಾಗಿಯಾಗಿದ್ದಕ್ಕೆ ಆಕ್ಷೇಪ….‌.

Suddi Sante Desk

ಧಾರವಾಡ –

ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರು ಪಾಲ್ಗೊಂಡಿದ್ದಾರೆ‌‌.ಹೌದು ಧಾರವಾಡ ದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ಗಳನ್ನು ವಿತರಣೆ ಮಾಡಿದ್ದಾರೆ.ಇನ್ನೂ ಇವರು ಈ ಒಂದು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ತೀವ್ರವಾದ ಆಕ್ಷೇಪ ವನ್ನು ಶಿಕ್ಷಕರು ಸರ್ಕಾರಿ ನೌಕರರು ವ್ಯಕ್ತಪಡಿಸಿದ್ದಾರೆ

ಸುದ್ದಿ ಸಂತೆ ಗೆ ಹಲವಾರು ನೌಕರರು ಕರೆ ಮಾಡಿ ಈ ಒಂದು ವಿಚಾರದಲ್ಲಿ ಜಿಲ್ಲಾ ನೌಕರರ ಅಧ್ಯಕ್ಷರು ಯಾಕೋ ಎಡವಿದ್ದಾರೆ ಬಹುಶಃ ಅವರಿಗೆ ಈ ಒಂದು ವಿಚಾರ ಗಮನಕ್ಕೆ ಬಂದಿಲ್ಲ ಎಂದರು.ಈಗಾಗಲೇ ಶಿಕ್ಷಕರ ಕ್ಷೇತ್ರದಿಂದ ಬಸವರಾಜ ಗುರಿಕಾರ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ ಹೀಗಿರುವಾಗ ಇವರನ್ನು ಆಹ್ವಾನ ಮಾಡಿದ್ದು ತಪ್ಪು ಎಂದಿದ್ದಾರೆ

ಇದನ್ನು ಇನ್ನೂ ಮುಂದೆ ಜಿಲ್ಲಾಧ್ಯಕ್ಷರು ಗಂಭೀರವಾಗಿ ಪರಿಗಣಿಸಬೇಕು ಹಾಗೇ ಈ ಒಂದು ವಿಚಾರ ಕುರಿತು ನೌಕರರು ಶಿಕ್ಷಕರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು ಇದನ್ನು ಜಿಲ್ಲಾಧ್ಯಕ್ಷರು ಯಾವ ರೀತಿ ನಿಬಾಯಿಸುತ್ತಾರೆ ಎಂಬೊಂದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.