ಹುಬ್ಬಳ್ಳಿಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡನಿಗೆ ಚಾಕು ಇರಿತ – ಬುದ್ದಿ ಹೇಳಲು ಹೋದ ಕೈ ಮುಖಂಡ ತೌಸಿಫ್ ಗೆ ಚಾಕು ಇರಿತ

Suddi Sante Desk
ಹುಬ್ಬಳ್ಳಿಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡನಿಗೆ ಚಾಕು ಇರಿತ – ಬುದ್ದಿ ಹೇಳಲು ಹೋದ ಕೈ ಮುಖಂಡ ತೌಸಿಫ್ ಗೆ ಚಾಕು ಇರಿತ

ಹುಬ್ಬಳ್ಳಿ

ಬುದ್ದಿ ಹೇಳಲು ಹೋದವನೊಂದಿಗೆ ಜಗಳ ತಗೆದು ಚಾಕು ಇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತಡರಾತ್ರಿ ಈ ಒಂದು ಘಟನೆ ನಡೆದಿದ್ದು ಕಾಂಗ್ರೇಸ್ ಪಕ್ಷದ ಮುಖಂಡ ತೌಸಿಫ್ ಗೆ ಚಾಕು ಇರಿಯಲಾಗಿದೆ.

 

ಬುದ್ದಿ ಹೇಳಲು ಹೋದ ಕೈ ಮುಖಂಡನಿಗೆ ಚಾಕು ಇರಿಯಲಾಗಿದ್ದು ನಗರದ ಸೋನಿಯಾ ಗಾಂಧಿ ನಗರದಲ್ಲಿ ತಡರಾತ್ರಿ ಈ ಒಂದು ಘಟನೆ ನಡೆದಿದ್ದು ಕೈ ಮುಖಂಡ ತೌಸೀಫ್ ಗೆ ಚಾಕು ಇರಿದಿದೆ ಗುಂಪೊಂದು.

 

ಚಾಕು ಇರಿತಕ್ಕೆ ಒಳಗಾದ ಕೈ ಮುಖಂಡನನ್ನು ಸಧ್ಯ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲು ಮಾಡಲಾಗಿದೆ.ಕೈ ಮುಖಂಡನೊಂದಿಗೆ ಜಗಳ ತಗೆದು ಚಾಕು ಇರದಿದ್ದ ಇಸ್ಮಾಯಿಲ್ ಹಾಗೂ ಸಹಚರರು.ಕೈ ಮುಖಂಡ ತೌಸೀಫ್ ಕಾಲು ಬೆನ್ನಿಗೆ ಚಾಕು ಇರಿದು ಹಲ್ಲೆಯನ್ನು ಮಾಡಲಾಗಿದೆ.

 

ಚಾಕು ಇರಿದ ಇಸ್ಮಾಯಿಲ್ ಹಾಗೂ ಸಹಚರರನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.