ಮರಕ್ಕೆ ಡಿಕ್ಕಿ ಹೊಡೆದ ಕಂಟೇನರ್ ಧಾರವಾಡದಲ್ಲಿ ಬೆಳ್ಳಂ ಬೆಳಿಗ್ಗೆ ದೊಡ್ಡ ಅವಘಡ – ಉರುಳಿ ಬಿದ್ದ ಮರ ಬೆಳಿಗ್ಗೆ ನಾಲ್ಕು ಗಂಟೆಯಿಂದ ಮರ ತೆರುವು ಮಾಡುತ್ತಿರುವ ಸಂಚಾರಿ ಪೊಲೀಸರು……

Suddi Sante Desk

ಧಾರವಾಡ –

ಕಂಟೇನರ್ ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿ ಣಾಮವಾಗಿ ಮರದ ಟೊಂಗೆಯೊಂದು ಮುರಿದು ಕೊಂಡು ಬಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಹೋಗುವ ದಾರಿಯ ಲ್ಲಿ ಈ ಒಂದು ಘಟನೆ ನಡೆದಿದೆ.ಮಹಾನಗರ ಪಾಲಿ ಕೆಯ ವೃತ್ತದಿಂದ ಗೋವಾಗೆ ಹೋಗಬೇಕಾದ ಕಂಟೇನರ್ ವೊಂದು ದಾರಿ ತಪ್ಪಿ ಜಿಲ್ಲಾ ಆಸ್ಪತ್ರೆಯ ದಾರಿಗೆ ಅದೇ ಗೋವಾ ರಸ್ತೆ ಎಂದುಕೊಂಡ ಚಾಲಕ ಹೋಗಿದ್ದಾನೆ.

ಸ್ವಲ್ಪು ಮುಂದೆ ಹೋಗಿದ್ದು ಕತ್ತಲಿನಲ್ಲಿ ದೊಡ್ಡದಾದ ಮರವನ್ನು ನೋಡದೆ ಅದಕ್ಕೆ ಡಿಕ್ಕಿ ಹೊಡೆದಿದ್ದಾನೆ ಹೀಗಾಗಿ ಮರದ ಕೊಂಬೆಯೊಂದು ಮುರಿದು ಬಿದ್ದಿ ದೆ.ದೊಡ್ಡದಾದ ಮರದ ಟೋಂಗೆಮುರಿದುಕೊಂಡು ರಸ್ತೆ ತುಂಬೆಲ್ಲಾ ಬಿದ್ದಿದ್ದು ಹೀಗಾಗಿ ರಸ್ತೆ ಸಂಪೂರ್ಣ ವಾಗಿ ಬಂದ್ ಆಗಿದೆ.

ಯಾವುದೇ ರೀತಿಯಲ್ಲಿ ಅನಾಹುತಗಳಾಗಿಲ್ಲ ಆದರೆ ರಸ್ತೆ ಮಾತ್ರ ಬಂದ್ ಆಗಿದ್ದು ಜಿಲ್ಲಾ ಆಸ್ಪತ್ರೆಗೆ ಹೋಗ ಲು ಯಾರಿಗೂ ಕೂಡಾ ದಾರಿ ಇಲ್ಲದಂತಾಗಿದೆ. ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸ ರು ಮತ್ತು ಎಸಿಪಿ ಅನುಷಾ ಅವರು ಸ್ಥಳಕ್ಕೇ ಆಗಮಿ ಸಿ ಪರಿಶೀಲನೆ ಮಾಡಿದರು.ಇನ್ನೂ ಬೆಳಿಗ್ಗೆ ನಾಲ್ಕು ಗಂಟೆಗೆ ಸ್ಥಳಕ್ಕೇ ಆಗಮಿಸಿರುವ ಸಂಚಾರಿ ಪೊಲೀ ಸ್ ಸಿಬ್ಬಂದಿಗಳಾದ ಎಎಸ್ಐ ವಾಯ್ ಡಿ ಮೇದಾ ರ ಬಸಯ್ಯ, ಲಕ್ಷ್ಮಣ ಲಮಾಣಿ ,ಅರಣ್ಯ ಅಧಿಕಾರಿ ತಲ್ಲೂರ ಸೇರಿದಂತೆ ಹಲವರು ಸ್ಥಳದಲ್ಲಿದ್ದು ರಸ್ತೆಯ ನ್ನು ಆವರಿಸಿಕೊಂಡಿರುವ ಮರವನ್ನು ತೆರುವು ಮಾ ಡತಾ ಇದ್ದಾರೆ.ಇನ್ನೂ ಇತ್ತ ಅವಾಂತರವನ್ನು ಮಾಡಿ ರುವ ಕಂಟೇನರ್ ನ್ನು ವಶಕ್ಕೆ ತಗೆದುಕೊಂಡು ಮುಂ ದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.