ಹೋಗುತ್ತಿದ್ದ ಕಾರಿಗೆ ಗುದ್ದಿದ ಕ್ಯಾಂಟೆನರ್ –ಪಾರಾದ ನಾಲ್ಕು ಜೀವಗಳು

Suddi Sante Desk

ಧಾರವಾಡ

ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಹೋಗುತ್ತಿದ್ದ ಕಾರಿಗೆ ಕ್ಯಾಂಟೇನರ್ ಗುದ್ದಿದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ.ಧಾರವಾಡದ ಹೊರ ವಲಯದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ಅಪಘಾತವಾಗಿದೆ.

ಗೋಕಾಕನಿಂದ ಶಿರಸಿ ಕಡೆಗೆ ಕಾರು ಹೋಗುತ್ತಿತ್ತು ಇನ್ನೂ ಪೂನಾದಿಂದ ಬೆಂಗಳೂರಿನತ್ತ ಡಿಎಚ್ ಎಲ್ ಕಂಪನಿಗೆ ಸೇರಿದ ಕ್ಯಾಂಟೇನರ್ ಹೋಗುತ್ತಿತ್ತು.

ತೇಗೂರು ಸರ್ಕಾರಿ ಪ್ರೌಢ ಶಾಲೆ ಬಳಿ ಈ ಒಂದು ಅಪಘಾತವಾಗಿದೆ. ಅರಣ್ಯ ಇಲಾಖೆಯ ಉಪ ಅರಣ್ಯಾಧಿಕಾರಿ ಸಾಗರ ಪನಗುದ್ದಿ ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತವಾಗಿದೆ. ಹೆದ್ದಾರಿಯಲ್ಲಿ ವೇಗವಾಗಿ ಕಾರು ಹೋಗುತ್ತಿತ್ತು. ಪಕ್ಕದಲ್ಲಿ ಹೋಗಲು ಜಾಗ ಇದ್ದರೂ ಕೂಡಾ ಹೊಗದೇ ಹಿಂದಿನಿಂದ ಕಾರಿದೆ ಗುದ್ದಿದೆ.

ಕಾರು ಸಂಪೂರ್ಣವಾಗಿ ಜಖಂ ಆಗಿದೆ. ಕಾರಿನ ಹಿಂದಿನ ಭಾಗ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ. ಇನ್ನೂ ಕಾರಿನಲ್ಲಿದ್ದ ಅರಣ್ಯಾಧಿಕಾರಿ ಸಾಗರ ಪನಗುದ್ದ ಸೇರಿದಂತೆ ನಾಲ್ಕು ಜನ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಕಾರಿನ ಚಾಲಕನ ತಲೆಗೆ ಗ್ಲಾಸ್ ಬಡಿದು ತಲೆ ಹೊಡೆದಿದ್ದು ಇನ್ನೂ ವಿಷಯ ತಿಳಿದ ಹೆದ್ದಾರಿಯ ಗಸ್ತು ವಾಹನದ ಸಿಬ್ಬಂದ್ದಿಗಳು ಗರಗ ಪೊಲೀಸ್ ಠಾಣೆಗೆ ಮಾಹಿತಿಯನ್ನು ರವಾನೆ ಮಾಡಿದ್ದಾರೆ.ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೇ ಆಗಮಿಸಿದ ಗರಗ ಪೊಲೀಸರು ಸ್ಥಳಕ್ಕೇ ಆಗಮಿಸಿ ಲಾರಿ ಮತ್ತು ಅಪಘಾತ ಮಾಡಿದ ಚಾಲಕನನ್ನು ವಶಕ್ಕೇ ತಗೆದುಕೊಂಡು ಪೊಲೀಸ್ ಠಾಣೆಗೆ ತಗೆದುಕೊಂಡು ಹೋಗಿದ್ದಾರೆ.

ಇನ್ನೂ ಅದೃಷ್ಟವಶಾತ್ ಸಮಯ ಸರಳವಾಗಿದ್ದು ಕಾರಿನ ಹಿಂಬಾಗ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಸಾಲ್ವರ ಜೀವ ಉಳಿದಿದ್ದು ದೊಡ್ಡ ಪ್ರಮಾಣದ ದುರಂತವೊಂದು ತಪ್ಪಿದಂತಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.