ರಾಯಚೂರು –
ಸಾಲಕ್ಕೆ ಹೆದರಿಕೊಂಡು ಸಿಆರ್ ಪಿ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿ ನಲ್ಲಿ ನಡೆದಿದೆ.ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಗೋಪಾಲ ನಗರದಲ್ಲಿ ಈ ಒಂದು ಘಟನೆ ನಡೆದಿದೆ.
ಕುರ್ಡಿ ಕ್ಲಸ್ಟರ್ ಸಿಆರ್ ಪಿ ಬಾಲಪ್ಪ( 45) ಆತ್ಮಹತ್ಯೆ ಮಾಡಿಕೊಂಡವರಾಗಿದ್ದು ಸಿಂಧನೂರು ಪಟ್ಟಣದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾ ಗಿದ್ದಾರೆ ಸಿಆರ್ ಪಿ ಬಾಲಪ್ಪ ಅವರು.ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ಸಾಲ ಯಾತಕ್ಕಾಗಿ ಮಾಡಲಾಗಿತ್ತು ಕಾರಣ ಏನು ಎಂಬ ಕುರಿತು ತನಿಖೆಯನ್ನು ಮಾಡಲಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ರಾಯಚೂರು…..