ದೊಡ್ಡವರ ಕ್ಲಬ್ ಬಿಟ್ಟಾರ – ಸಣ್ಣವರ ಕ್ಲಬ್ ಮೇಲೆ ಪೊಲೀಸರು ರೇಡ್ ಮಾಡ್ಯಾರ – ದೀಪಕ ಚಿಂಚೋರೆ

Suddi Sante Desk

ಧಾರವಾಡ –

ಧಾರವಾಡ ಜಿಲ್ಲೆಯಲ್ಲಿ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಪ್ರಕರಣ ಕುರಿತಂತೆ ಪೊಲೀಸರ ವಿರುದ್ದ ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ ವಾಗ್ದಾಳಿ ನಡೆಸಿದ್ದಾರೆ. ಧಾರವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೇಕಂತಲೇ ಪೊಲೀಸರು ದೀಪಾವಳಿ ಹಬ್ಬಕ್ಕೆ ಅಡ್ಡಿಪಡಿಸಿದ್ದಾರೆಂದರು. ಇನ್ನೂ ದೀಪಾವಳಿ ಹಿಂದೂಗಳ ದೊಡ್ಡ ಹಬ್ಬವಾಗಿದ್ದ ಅದೇ ದಿನ ಬೇರೆ ಕ್ಲಬ್ ಗಳಲ್ಲಿಯೂ ಜೂಜು ನಡೆದಿದ್ದವು ನಗರದ ಜಿಮ್‌ಖಾನಾ ಕ್ಲಬ್ ನಲ್ಲಿ ಜೂಜಾಡಿದ್ದಾರೆ ಬೇರೆ ಬೇರೆ ಕ್ಲಬ್ ಗಳಲ್ಲಿ ಜೂಜು ಆಡಲಾಗಿದೆ. ಪೊಲೀಸರು ದೊಡ್ಡವರ ಕ್ಲಬ್ ಬಿಟ್ಟಿದ್ದಾರೆ ಬೇಕಂತಲೇ ಕೆಲವು ಕ್ಲಬ್ ಗಳನ್ನು ಅದರಲ್ಲೂ ಮಧ್ಯಮ ವರ್ಗದವರು ಎಲ್ಲಿ ಎಲ್ಲಿ ಆಡುತ್ತಿದ್ದರು ಅದರ ಮೇಲೆ ಟಾರ್ಗೆಟ್ ಮಾಡಲಾಗಿದೆ ಎಂದರು.ಇನ್ನೂ ದೊಡ್ಡವರಿಗೊಂದು, ಸಣ್ಣವರಿಗೊಂದು ನ್ಯಾಯನಾ ಎಂದು ದೀಪಕ ಚಿಂಚೊರೆ ಪೊಲೀಸರನ್ನು ಪ್ರಶ್ನೆ ಮಾಡಿದರು.

ಧಾರವಾಡವನ್ನಷ್ಟೇ ಏಕೆ ಟಾರ್ಗೆಟ್ ಮಾಡಲಾಗಿದೆ ಉತ್ತರ ವಲಯ ಐಜಿಪಿಗೆ ಬೇರೆ ಜಿಲ್ಲೆಗಳು ಕಾಣಲಿಲ್ಲವೇ ಐಜಿಪಿ ರಾಘವೇಂದ್ರ ಸುಹಾಸ್ ಅವರಿಗೆ ಪ್ರಶ್ನೆ ಮಾಡಿದರು. ಇನ್ನೂ ಇಂಥ‌ ಪ್ರಕರಣದಲ್ಲಿ ಪೊಲೀಸ್ ಠಾಣೆಯಲ್ಲಿಯೇ ಬೇಲ್ ನೀಡಲಾಗುತ್ತೆ ಆದರೆ ಇಲ್ಲಿ ಬೇಕಂತಲೇ ತೊಂದರೆ ಕೊಡಲಾಗಿದೆ ಪೊಲೀಸರ ದಬ್ಬಾಳಿಕೆ ಹೆಚ್ಚಾಗಿದೆ ಕೆಲವರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗಿದೆ ವೃದ್ಧರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎನ್ನುತ್ತಾ ಪೊಲೀಸರ ಕ್ರಮವನ್ನು ಖಂಡಿಸಿದರು. ಇನ್ನೂ ಜಾಮೀನು ನೀಡಿದ ಬಳಿಕ ಮತ್ತೆ ಕರೆಸಿಕೊಳ್ಳಲಾಗಿದೆ ಠಾಣೆಗೆ ಕರೆಸಿ ಮತ್ತೆ ವಿಚಾರಣೆ ಮಾಡಲಾಗಿದೆ ಹಿಂದೂಗಳ ದೊಡ್ಡ ಹಬ್ಬ ದೀಪಾವಳಿ ವೈಯಕ್ತಿಕ ಪ್ರತಿಷ್ಠೆಗಾಗಿ ಪೊಲೀಸರು ಇಂಥ ಕೆಲಸ ಮಾಡಿದ್ದಾರೆ ಧಾರವಾಡ ಜಿಲ್ಲೆಯನ್ನೇ ಏಕೆ ಆಯ್ದುಕೊಳ್ಳಲಾಯಿತು ಎಂದು ಐಜಿಪಿಯನ್ನು ಮತ್ತು ಪೊಲೀಸರನ್ನು ದೀಪಕ ಚಿಂಚೋರೆ ನೇರವಾಗಿ ಪ್ರಶ್ನೆ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.