ಶವ ಸಂಸ್ಕಾರದ ಹಣವನ್ನು ವಿಳಂಬ ಮಾಡದೇ ಬಿಡುಗಡೆ ಮಾಡಲು ಒತ್ತಾಯ – ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಎಸ್ ಎಫ್ ಪಾಟೀಲ ಆಗ್ರಹ

Suddi Sante Desk

ಬೆಂಗಳೂರು –

ಸರ್ಕಾರಿ ಸೇವೆಯಲ್ಲಿದ್ದಾಗ ಮರಣ ಹೊಂದಿದ ನೌಕ ರರ ಶವ ಸಂಸ್ಕಾರಕ್ಕೆ ರಾಜ್ಯ ಸರ್ಕಾರ ಹಣವನ್ನು ಹೆಚ್ಚಿಗೆ ಮಾಡಿದೆ.ಈ ಹಿಂದೆ ಇದ್ದ 5000 ರೂಪಾಯಿ ಗಳ ಸಹಾಯ ಧನವನ್ನು ಈಗ ಅದನ್ನು 15000 ಸಾವಿರ ರೂಪಾಯಿಗೆ ಹೆಚ್ಚಿಗೆ ಮಾಡಿದೆ.5000 ಸಾವಿರ ರೂಪಾಯಿ ಇದ್ದ ಹಣ ಯಾವುದಕ್ಕೂ ಸಾಲೊದಿಲ್ಲ ಕಡಿಮೆಯಾಗುತ್ತದೆ ಎಂದು ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ಕೋಶ್ಯಾಧ್ಯಕ್ಷ ಎಸ್ ಎಫ್ ಪಾಟೀಲ್ ಒತ್ತಾಯ ಮಾಡಿದ್ದರು

ಈ ಕುರಿತಂತೆ ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಯಡಿಯೂರಪ್ಪ 5000 ಸಾವಿರ ಇದ್ದ ಆದೇಶವನ್ನು ಮಾರ್ಪಾಡು ಮಾಡಿ ಸಧ್ಯ 15000 ಸಾವಿರ ರೂಪಾಯಿಗೆ ಹೆಚ್ಚಿಗೆ ಮಾಡಿ ಹೊಸದೊಂದು ಆದೇಶವನ್ನು ಮಾಡಿದ್ದಾರೆ. ಈ ಒಂದು ಆದೇಶದೊಂದಿಗೆ ಯಾವುದೇ ಕಾರಣಕ್ಕೂ ಸ್ಥಳೀಯವಾಗಿ ಅದನ್ನು ನೋಡಿಕೊಂಡು ಕೂಡಲೇ ವಿಳಂಭವನ್ನು ಮಾಡದೇ ಹಣವನ್ನು ಬಿಡುಗಡೆ ಮಾಡಲು ಆದೇಶವನ್ನು ನೀಡಿದ್ದಾರೆ.

ಆದರೆ ಈ ಒಂದು ಆದೇಶವನ್ನು ಮಾಡಿದರು ಕೂಡಾ ಅಧಿಕಾರಿಗಳು ಮೃತರಾದ ಶಿಕ್ಷಕರ ಅಂತ್ಯ ಸಂಸ್ಕಾರಕ್ಕೆ ವಿನಾಕಾರಣ ವಿಳಂಬ ಮಾಡುತ್ತಿರುವ ಕುರಿತಂತೆ ದೂರುಗಳು ಬಂದಿದ್ದು ಹೀಗಾಗಿ ಯಾರು ಕೂಡಾ ಇಂತಹ ಒಂದು ಕಾರ್ಯದಲ್ಲಿ ಅಧಿಕಾರಿ ಗಳು ವಿನಾಕಾರಣ ವಿಳಂಬವನ್ನು ಮಾಡದೇ ಬಿಡು ಗಡೆ ಮಾಡುವಂತೆ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶೋಧ್ಯಕ್ಷ ಎಸ್ ಎಫ್ ಪಾಟೀಲ ಒತ್ತಾಯ ಮಾಡಿದ್ದಾರೆ.

ಸುದ್ದಿ ಸಂತೆ ಯೊಂದಿಗೆ ಮಾತನಾಡಿದ ಅವರು ಈ ಒಂದು ಆಗ್ರಹವನ್ನು ಮಾಡಿದ್ದು ವಿಳಂಬ ಮಾಡಿದರೆ ಇಂತಹ ಕಾರ್ಯದಲ್ಲಿ ಅಂತ್ಯ ಸಂಸ್ಕಾರ ಮಾಡಲು ತೊಂದರೆಯಾಗುತ್ತದೆ ಇದಕ್ಕೆ ಅಧಿಕಾರಿಗಳು ಅವ ಕಾಶವನ್ನು ಕೊಡಬಾರದು ಎಂದಿದ್ದಾರೆ. ಇವರೊಂ ದಿಗೆ ಸಂಘದ ಮುಖಂಡರು ಸದಸ್ಯರಾದ ಪವಾಡೆ ಪ್ಪ,ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇ ಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮ ನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾ ರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನು ಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ, ನಾಗರಾ ಜ ಕಾಮನಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ, ಎಂ ಐ ಮುನವಳ್ಳಿ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀ ಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ ಸೇರಿದಂತೆ ಹಲವರು ಒತ್ತಾಯ ಮಾಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.