ಧಾರವಾಡ ಜಿಲ್ಲೆಯಲ್ಲಿ 11 ದಿನಗಳ ವರೆಗೆ ಗಣೇಶೋತ್ಸವ ಆಚರಣೆಗೆ ಅವಕಾಶ – DC ಅವರಿಂದ ಆದೇಶ

Suddi Sante Desk

ಧಾರವಾಡ –

ಧಾರವಾಡ ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಗರಿಷ್ಠ 11 ದಿನಗಳವರೆಗೆ ಕೋವಿಡ್ ಮಾರ್ಗಸೂಚಿ ಗಳೊಂದಿಗೆ ಆಚರಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾದಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಸೆ.5 ರಂದು ಹೊರಡಿಸಿದ್ದ ಮಾರ್ಗಸೂಚಿಗಳಲ್ಲಿ ಗರಿಷ್ಟ 5 ದಿನ ಗಣೇಶೋತ್ಸವ ಆಚರಿಸಲು
ಅವಕಾಶ ನೀಡಲಾಗಿತ್ತು.ಪರಿಷ್ಕೃತ ಆದೇಶದಲ್ಲಿ ಈ ನಿಯಮ‌ ಸಡಿಲಿಸಿ ಜಿಲ್ಲೆಯಲ್ಲಿ ಈ ಹಿಂದೆ ಸಾಂಪ್ರ ದಾಯಿಕವಾಗಿ 11 ದಿನಗಳವರೆಗೆ ಗಣೇಶೋತ್ಸವ ಆಚರಿಸುತ್ತಿದ್ದವರಿಗೆ ಈ ಬಾರಿಯೂ ಗರಿಷ್ಟ 11 ದಿನಗಳ ಕಾಲ ಗಣೇಶೋತ್ಸವ ಆಚರಿಸಲು ಅವಕಾಶ ನೀಡಲಾಗಿದೆ ಎಂದಿದ್ದಾರೆ

ಆಚರಣೆ ವೇಳೆ ಕೋವಿಡ್-19 ರ ಎಲ್ಲಾ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸ ಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿ ಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.