ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸರಿಂದ ಕ್ರಿಕೇಟ್ ಬೆಟ್ಟಿಂಗ ಆಡುತ್ತಿದ್ದವರ ಬಂಧನ.

Suddi Sante Desk

ಧಾರವಾಡ –

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದ ಜಾಲವನ್ನು ಧಾರವಾಡದ ಶಹರ ಪೊಲೀಸ್ ಠಾಣೆ ಪೊಲೀಸರು ಭೇಧಿಸಿದ್ದಾರೆ‌‌. ಜೂಜಾಟ ಆಡುವವರ ಮೇಲೆ ನಿಗಾವಹಿಸಿದ ಪೊಲೀಸರು ದಾಳಿ ಮಾಡಿ ಇಬ್ಬರನ್ನುಬಂಧಿಸಿದ್ದಾರೆ‌.


ಇರ್ಪಾನ್ ತಂದೆ ಮನಸೂರ ಬೆಳಗಾವಕರ, ವಯಾ; 26 ವರ್ಷ ಸಾ; ಧಾರವಾಡದ ಬಾರಾ ಇಮಾಮಗಲ್ಲಿ ಇನ್ನೂ ಇವರೊಂದಿಗೆ ಚೇತನ್ ತಂದೆ ಕಲ್ಯಾಣಿರಾವ್ ಜೋಶಿ, 28 ವರ್ಷ ಸಾ; ಧಾರವಾಡ ಮಂಗಳವಾರಪೇಟ್ ಚರಂತಿಮಠ ಓಣಿ ಇಬ್ಬರನ್ನು ದಸ್ತಗೀರ ಮಾಡಲಾಗಿದೆ .

ಇವರ ವಶದಿಂದ. 11,500/- ರೂ, ನಗದು ಹಣ, ಎರಡು ಕಂಪನಿಯ ಮೊಬೈಲ, ಒಂದು ಪೆನ್ನು ಮತ್ತು ಒಂದು ನೋಟ್ ಪುಸ್ತಕ ವಶಕ್ಕೆ ಪಡೆದುಕೊಂಡು ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ. ಈ ಪ್ರಕರಣವನ್ನು ಬೇದಿಸಿದ ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದರು.

ಪೊಲೀಸ್ ಆಯುಕ್ತರಾದ ಕೆ.ರಾಮರಾಜನ್ ಉಪ ಪೊಲೀಸ್ ಆಯುಕ್ತರು (ಕಾವಸು) ಮತ್ತು ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ್ ಆಯುಕ್ತರು (ಅಪರಾಧ ವ ಸಂಚಾರ) ಮಾರ್ಗದರ್ಶನದಲ್ಲ್ಲಿ ಧಾರವಾಡ ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ ರವರ ನೇತೃತ್ವದಲ್ಲಿ ಧಾರವಾಡ ಶಹರ ಠಾಣೆಯ ಹದ್ದಿಯ ಧಾರವಾಡ ಮಣಕಿಲ್ಲಾ ಮುಖ್ಯ ರಸ್ತೆ ಮೇಲೆ ಈ ಕೆಳಕಂಡ ಆರೋಪಿತರು ಕ್ರಿಕೇಟ್ ಬೆಟ್ಟಿಂಗ್‍ದಲ್ಲಿ ತೊಡಗಿದಾಗ ದಾಳಿ ಮಾಡಿ ಆರೋಪಿಗಳನ್ನು ಬಂಧನ ಮಾಅಲಾ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.