ಧಾರವಾಡ ದಲ್ಲಿ ಚಾಕು ಇರಿತ ನವೀನ್ ಹೆ ಚಾಕು ಇರಿದ ದುರ್ಷ್ಕರ್ಮಿಗಳು ನಿಗೂಢವಾಗಿ ಉಳಿದ ಚಾಕು ಇರಿತದ ಕಾರಣ…..

Suddi Sante Desk

ಧಾರವಾಡ –

ಧಾರವಾಡದಲ್ಲಿ ಮತ್ತೆ ಚಾಕು ಸದ್ದು‌ ಮಾಡಿದ್ದು ಯುವಕನ ಕುತ್ತಿಗೆಗೆ ಚಾಕು ಇರಿತ ಮಾಡಲಾಗಿದೆ.ಹೌದು ಧಾರವಾಡ ಹೊರವಲಯದ ನುಗ್ಗಿಕೇರಿ ಗುಡ್ಡದ ಬಳಿ ಈ ಒಂದು ಘಟನೆ ನಡೆದಿದೆ.ನವೀನ್ ದೊಡಮನಿ (೩೦) ಎಂಬುವ ವನೇ ಚಾಕು ಇರಿತಕ್ಕೆ ಒಳಗಾದವನಾಗಿದ್ದಾನೆ.

ಹಾವೇರಿ‌ ಮೂಲದ ನವೀನ್ ದೊಡಮನಿ ಎಂಬಾತನೇ ಚಾಕು ಇರಿತಕ್ಕೊಳಗಾಗಿದ್ದು ಗುಡ್ಡದಿಂದ ಕೆಳಗೆ ಬಂದು ಪ್ರಾಣ ಉಳಿಸುವಂತೆ ಗೋಗರೆದಿದ್ದಾನೆ ನವೀನ್ ಯುವಕನ ಸ್ಥಿತಿ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳೀಯರು ಅಲ್ಲದೇ ಆಸ್ಪತ್ರೆಗೂ ಶಿಪ್ಟ್ ಮಾಡಿದ್ದಾರೆ.

ಸದ್ಯ ಯುವಕನನ್ನ ಧಾರವಾಡದ ಸಿವಿಲ್ ಅಸ್ಪತೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಇತ್ತ ಆರೋಪಿಗಳಿಗಾಗಿ ಪೊಲೀಸರು ಜಾಲವನ್ನು ಬೀಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.