ಕೊರೊನಾ ವ್ಯಾಕ್ಸಿನೇಷನ್‌ ತಗೆದುಕೊಂಡ ಧಾರವಾಡ ಉಪವಿಭಾಗಾಧಿಕಾರಿ – ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ತಗೆದುಕೊಂಡು ಸರಳತೆ ಮೆರೆದ ಅಧಿಕಾರಿ

Suddi Sante Desk

ಧಾರವಾಡ –

ಕೊರೊನಾ ಮಹಾಮಾರಿಯ ಕೋವಿಶೀಲ್ಡ್ ವ್ಯಾಕ್ಸಿನೇಷನ್‌ ಅನ್ನು ಧಾರವಾಡ ಜಿಲ್ಲೆಯ ಉಪವಿಭಾಗಾಧಿಕಾರಿ ಗೋಪಾಲಕೃಷ್ಣ ಅವರು ತಗೆದುಕೊಂಡರು.

ಇಂದು ಉಪವಿಭಾಗಾಧಿಕಾರಿ ಡಾ ಗೋಪಾಲಕೃಷ್ಣ ಅವರು ನಗರದ ಪೊಲೀಸ್ ಕ್ವಾಟರ್ಸ್ ನಲ್ಲಿರುವ PHQ ಧಾರವಾಡ PHC ಯಲ್ಲಿ ವ್ಯಾಕ್ಸಿನೇಷನ್‌ ಮಾಡಿಸಿಕೊಂಡರು.

ಯಾವುದೇ ದೊಡ್ಡ ಖಾಸಗಿ ಆಸ್ಪತ್ರೆಯಲ್ಲಿ ಹೋಗದೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಶೀಲ್ಡ್ ವ್ಯಾಕ್ಸಿನೇಷನ್‌ ಮಾಡಿಸಿಕೊಂಡು ಸರಳತೆ ಯನ್ನು ಮೆರೆದರು.

ಇದೇ ವೇಳೆ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಇತರೆ ಸಿಬ್ಬಂದಿ ಗಳೊಂದಿಗೆ ಒಂದು ಗ್ರೂಪ್ ತಗೆದುಕೊಂಡು ತಾವೊಬ್ಬರು ಸರಳತೆಯ ಅಧಿಕಾರಿ ಎಂಬುದನ್ನು ತೋರಿಸಿಕೊಟ್ಟರು. ಈ ಒಂದು ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಗಳು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.