This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

Local News

ಮೈಸೂರಿಗೆ ಬಚ್ಚಾಖಾನ್ ನನ್ನು ಕರೆದೊಯ್ದ ಧಾರವಾಡ ಉಪನಗರ ಪೊಲೀಸರು

WhatsApp Group Join Now
Telegram Group Join Now

ಧಾರವಾಡ –


ಭೂಗತ ಪಾತಕಿ ಬಚ್ಚಾಖಾನ್ ನನ್ನು ಧಾರವಾಡದ ಉಪನಗರ ಪೊಲೀಸರು ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ.

ಈಗಾಗಲೇ ಇವರನ್ನು ನ್ಯಾಯಾಲಯಕ್ಕೆ ಹಾಜರು ಮಾಡಿ ವಿಚಾರಣೆಗೆ ನಾಲ್ಕು ದಿನ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ‌. ಇದಕ್ಕೂ ಮುಂಚೆ ಮೈಸೂರು ಕಾರಾಗೃಹದಲ್ಲಿದ್ದ ಬಚ್ಚಾಖಾನ್ ನನ್ನು ಧಾರವಾಡ ಉಪನಗರ ಠಾಣೆ ಇನಸ್ಪೇಕ್ಟರ್ ಪ್ರಮೋದ ಯಲಿಗಾರ ನೇತ್ರತ್ವದಲ್ಲಿ ಕಾರ್ಯಾಚರಣೆ ಮಾಡಿದ ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.

ಮೈಸೂರು ಜೈಲಿನಲ್ಲಿದ್ದುಕೊಂಡೇ ಧಾರವಾಡದ ಅನೇಕರಿಗೆ ಬೆದರಿಕೆ ಹಾಕುತ್ತಿದ್ದನಂತೆ. ತನ್ನ ಬಂಟರ ಮೂಲಕ ಧಮ್ಕಿ ಹಾಕಿಸಿ ಹಫ್ತಾ ವಸೂಲಿ ಗಿಳಿದಿದ್ದನಂತೆ ಬಚ್ಚಖಾನ್, ಫ್ರೂಟ್ ಇರ್ಫಾನ್ ಸಾವಿನ ಬಳಿಕ ಹುಬ್ಬಳ್ಳಿ-ಧಾರವಾಡ ಮೇಲೆ ಹಿಡಿತ ಸಾಧಿಸಲು ಮುಂದಾಗಿರೋ ಬಚ್ಚಾಖಾನ್ ನನ್ನು ಉಪನಗರ ಠಾಣೆ ವ್ಯಾಪ್ತಿಯಲ್ಲಿ ಅನೇಕ ಉದ್ಯಮಿಗಳಿಗೆ ಬೆದರಿಕೆ ಪೆಟ್ರೋಲ್ ಬಂಕ್ ಮಾಲೀಕರು ಸೇರಿ ಅನೇಕರಿಗೆ ಬಚ್ಚಾಖಾನ್ ಬಂಟರಿಂದ ಧಮ್ಕಿ ನಡೆದಿದ್ದಂತೆ. ಈ ಹಿನ್ನೆಲೆ ಬಚ್ಚಾಖಾನ್ ವಶಕ್ಕೆ ಪಡೆದ ಉಪನಗರ ಠಾಣೆ ಪೊಲೀಸರು ಬಚ್ಚಾಖಾನ್‌ನ ಮೂವರು ಬಂಟರನ್ನೂ ಈಗಾಗಲೇ ಬಂಧಿಸಿ ವಿಚಾರಣೆಗೆ ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ.

ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆಗೆ ನಾಲ್ಕು ದಿನ ತಗೆದುಕೊಂಡಿದ್ದಾರೆ.ಕೆಲ ಸಮಯ ಬಚ್ಚಾಖಾನ್ ನನ್ನು ವಿಚಾರಣೆ ನಡೆಸಿದ ಧಾರವಾಡ ಉಪನಗರ ಪೊಲೀಸರು ಸಧ್ಯ ಹೆಚ್ಚಿನ ವಿಚಾರಣೆಗೆ ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ. ಇನ್ಸ್ಪೆಕ್ಟರ್ ಪ್ರಮೋದ್ ಯಲಿಗಾರ ನೇತೃತ್ವದಲ್ಲಿ ಮೈಸೂರಿಗೆ ಪೊಲೀಸರು ಹೆಚ್ಚಿನ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

ಪ್ರಮುಖವಾಗಿ ಬೆದರಿಕೆ ಹಾಕಿದ್ದವರು ಯಾರು ಯಾವ ನಂಬರ್ ನಿಂದ ಹಾಕಿದ್ದು ಯಾರು ಯಾವಾಗ ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಹುಡುಕಲು ಪೊಲೀಸರು ಬಚ್ಚಾಖಾನ್ ನನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ. ಇವನೊಂದಿಗೆ ಇವನ‌ ಮೂರು ಜನ ಸಹಚರರನ್ನು ಪೊಲೀಸರು ಕರೆದುಕೊಂಡು ಹೋಗಿದ್ದು ಮೊಬೈಲ್ ಫೋನ್ ಸೇರಿದಂತೆ ಹಲವು ವಸ್ತುಗಳನ್ನು ಉಪನಗರ ಪೊಲೀಸರು ಹುಡುಕಲು ತೆರಳಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk