ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ರಾ ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಮತ್ತು ಸಹೋದರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು…..

Suddi Sante Desk

ಧಾರವಾಡ –

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಿಗದಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಘಾಟಿನ ಹಾಗೂ ಅವರ ಸಹೋದರರು ಓರ್ವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಮುರಕಟ್ಟಿ ಹದ್ದಿಗೆ ಹೊಂದಿಕೊಂಡಿರುವ 6 ಎಕರೆ ಜಮೀನು ಇದ್ದು, ಆ ಜಮೀನಿನ ವ್ಯಾಜ್ಯ ನ್ಯಾಯಾಲ ಯದಲ್ಲಿದೆ. ಹೀಗಿದ್ದರೂ ನಿಂಗಪ್ಪ ಘಾಟಿನ ಹಾಗೂ ಅವರ ಸಹೋದರರು ಆ ಭೂಮಿಯನ್ನು ಇಂದು ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಅಪ್ಪಣ್ಣ ಕಾಶಿ ಸೇರಿದಂತೆ ಇನ್ನಿತರ ನಾಲ್ಕೈದು ಜನ ಅಲ್ಲಿಗೆ ಹೋಗಿ ಈ ಜಮೀನಿನ ವ್ಯಾಜ್ಯ ಇನ್ನೂ ನ್ಯಾಯಾಲಯದಲ್ಲಿ ದೆ.

ಈಗೇಕೆ ಉಳುಮೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಮಾತಿಗೆ ಮಾತು ಬೆಳೆದು ನಿಂಗಪ್ಪ ಘಾಟಿನ, ನಾಗರಾಜ ಘಾಟಿನ ಹಾಗೂ ಅರ್ಜುನ್ ಘಾಟಿನ್ ಎಂಬುವವರು ಕೊಡಲಿ ಸೇರಿದಂತೆ ಮಾರಕಾಸ್ತ್ರಗಳಿಂದ ಅಪ್ಪಣ್ಣ ಕಾಶಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಜಗಳದ ದೃಶ್ಯವನ್ನು ಅಲ್ಲಿಯವರೇ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಅಪ್ಪಣ್ಣ ಕಾಶಿ ಅವರ ಬೆನ್ನಿಗೆ ಗಾಯವಾಗಿದ್ದು, ಚಿಕಿತ್ಸೆ ನಂತರ ಅವರು, ಧಾರವಾಡ ಗ್ರಾಮೀಣ ಠಾಣೆಯಲ್ಲಿ ನಿಂಗಪ್ಪ ಘಾಟಿನ ಸೇರಿದಂತೆ ಮೂವರ ಮೇಲೆ ದೂರು ದಾಖಲಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.