ಧಾರವಾಡದ ಮನಗುಂಡಿ ಗ್ರಾಮದಲ್ಲಿ ಶಾಸಕ ಅಮೃತ ದೇಸಾಯಿ ಸಭೆ – ಜಿಲ್ಲಾ ಯುವ ಮೋರ್ಚಾದ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚೆ…..

Suddi Sante Desk

ಧಾರವಾಡ –

ಧಾರವಾಡದ ಮನಗುಂಡಿ ಗ್ರಾಮದಲ್ಲಿ ನಡೆಯುತ್ತಿದ್ದ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಣಿ ಗೆ ತೆರೆ ಬಿದ್ದಿದೆ ಹೌದು ಎರಡು ದಿನಗಳ ಈ ಒಂದು ಕಾರ್ಯಕಾ ರಣಿ ಯಲ್ಲಿ ಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ ಚುನಾವಣೆ ಯ ಕುರಿತು ಹಾಗೂ ಪಕ್ಷದ ಸಂಘಟನೆ ಚರ್ಚೆ ಮತ್ತು ತರಬೇತಿ ಯನ್ನು ನೀಡಿ ಸಲಹೆ ಸೂಚನೆಗಳನ್ನು ನೀಡಲಾಯಿತು

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಶಾಸಕ ಸಿ ಎಮ್ ನಿಂಬಣ್ಣನವರ ಸೇರಿದಂತೆ ಪಕ್ಷದ ಗ್ರಾಮೀಣ ಘಟಕದ ಜಿಲ್ಲಾ ಅಧ್ಯಕ್ಷರು ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷರು ಈ ಒಂದು ಕಾರ್ಯಕಾರಣಿ ಯಲ್ಲಿ ಪಾಲ್ಗೊಂಡು ಸಂಘಟನೆ ಕುರಿತು ತರಬೇತಿ ಸಲಹೆ ಸೂಚನೆಗಳನ್ನು ನೀಡಿದರು

ಇನ್ನೂ ಇದೇ ವೇಳೆ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕೂಡಾ ಪಾಲ್ಗೊಂಡು ಪಕ್ಷದ ಸಂಘಟನೆ ಮತ್ತು ಇತರೆ ವಿಚಾರ ಗಳ ಬಗ್ಗೆ ಮಾಹಿತಿ ಯನ್ನು ನೀಡಿದರು ಇದರೊಂದಿಗೆ ಭಾಜಪಾ ಯುವ ಮೋರ್ಚಾ ಧಾರವಾಡ ಜಿಲ್ಲೆಯ ಜಿಲ್ಲಾ ಯುವ ಮೋರ್ಚಾದ ಸಹಲ್ ಹಾಗೂ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಪಕ್ಷ ಸಂಘಟನೆ ಕುರಿತು ಯುವ ಮಿತ್ರರೊಂದಿಗೆ ಚರ್ಚೆ ಮಾಡಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.