ಕಾರವಾರ –
ಡಿವೈಎಸ್ಪಿ ವಾಹನ ಡಿಕ್ಕಿಯಾಗಿ ಓಮಿನಿ ಪಲ್ಟಿಯಾದ ಘಟನೆ ಕಾರವಾರದಲ್ಲಿ ನಡೆದಿದೆ.ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.ಕಾರವಾರ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಸೇರಿ 6 ಜನರು ಗಾಯಗೊಂಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕು ಬಳಿ ಈ ಒಂದು ಅಪಘಾತವಾಗಿದೆ.ಕಾರವಾರದಿಂದ ಮುಂಡಗೋಡಿಗೆ ತೆರಳುತ್ತಿದ್ದರು ಡಿವೈಎಸ್ಪಿ. ಓಮಿನಿಯಲ್ಲಿದ್ದ 5 ಮಂದಿಗೆ ಸಣ್ಣಪುಟ್ಟ ಗಾಯಗ ಳಾಗಿದ್ದು ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.