ಗಲಾಟೆ ಮಾಡುವವರಿಗೆ ಒಳ್ಳೆಯ ದಾಗಲಿ ಎಂದರು ಮಾಜಿ ಸಚಿವ ಸಂತೋಷ ಲಾಡ್ ಹೀಗೆ ಹೇಳಿ ಎದುರಾಳಿಗಳಿಗೆ ಟಾಂಗ್…..

Suddi Sante Desk

ಕಲಘಟಗಿ –

ಕಲಘಟಗಿ ಕ್ಷೇತ್ರದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಕಾರ್ಯಕ್ರಮದಲ್ಲಿ ಹಾಗೇ ಅವರು ಹೋಗಿದ ಕಡೆಗಳಲ್ಲಿ ಗಲಾಟೆ ಮಾಡುತ್ತಿರುವ ವಿಚಾರ ಕುರಿತು ಮಾಜಿ ಸಚಿವ ಸಂತೋಷ ಲಾಡ್ ತೀಕ್ಷ್ಣವಾಗಿ ಹೇಳಿದ್ದಾರೆ.ಕಲಘಟಗಿಯ ಅಮೃತ ನಿವಾಸ ದಲ್ಲಿ ಮಾತನಾಡಿದ ಅವರು ಹೀಗೆ ಇದನ್ನು ಮಾಡಿಸುವ ವರಿಗೆ ಒಳ್ಳೆಯದಾಗಲಿ ಯಾಕೇ ಹೀಗೆ ಮಾಡತಾ ಇದ್ದಾರೆ ಎಂಬೊದೆ ತಿಳಿಯುತ್ತಿಲ್ಲ ಎಂದರು

ಕೆಲವೊಂದಿಷ್ಟು ಯುವಕರು ವಿಡಿಯೋ ಮಾಡೊ ದು ಮಾಧ್ಯಮದವರಿಗೆ ಕೊಡೊದು ಹೀಗೆ ಮಾಡತಾ ಇದ್ದಾರೆ ಇದೇನು ನನಗೆ ಹೊಸದೇನಲ್ಲ ಎಂದರು. ಆದರೆ ಹೀಗೆ ಮಾಡೊದರಿಂದ ಮಾಡುವವರಿಗೆ ಆ ದೇವರು ಒಳ್ಳೆಯದನ್ನು ಮಾಡಲಿ ಎಂದರು

ನಾನು ಹತ್ತು ವರ್ಷಗಳ ಕಾಲ ಕೆಲಸವನ್ನು ಮಾಡಿ ದ್ದೇನೆ ಸ್ವಾತಂತ್ರ್ಯ ನಂತರ ಒಮ್ಮೆಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರಲಿಲ್ಲ ಈಗ ನಾನು ಬಂದ ಮೇಲೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಷ್ಟ ಪಟ್ಟು ಕಟ್ಟಿದ್ದೇನೆ ಈಗ ಯಾರೋ ಯಾರೋ ಬಂದು ಏನೇನೂ ಮಾತನಾಡುತ್ತಿದ್ದಾರೆ ಜೊತೆಗೆ ಹೀಗೆ ಮಾಡುವವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎನ್ನುತ್ತಾ ಎದುರಾಳಿಗಳಿಗೆ ಟಾಂಗ್ ನೀಡಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.