ಧಾರವಾಡದ ಗರಗ ಗ್ರಾಮದಲ್ಲಿ ಇಸ್ಮಾಯಿಲ್ ತಮಟಗಾರ ಸಮ್ಮುಖದಲ್ಲಿ ಮೊಹರಂ ಹಬ್ಬದಲ್ಲಿ ಹಣ ತೂರಾಟ – ಬಹಿರಂಗ ಕಾರ್ಯಕ್ರಮದಲ್ಲಿ ಹಾಡುವಾಗ ಗಾಯಕನ ಹಣ ತೂರಾಟ…..

Suddi Sante Desk

ಧಾರವಾಡ –

ಯಾವುದಾದರೂ ಕಾರ್ಯಕ್ರಮದಲ್ಲಿ ಅಲ್ಲೇ ಇಲ್ಲೇ ಹಣ ವನ್ನು ತೂರಾಟ ಮಾಡಿದನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಧಾರವಾಡದ ಗರಗ ಗ್ರಾಮದಲ್ಲಿ ಇಂತಹದೊಂದು ದೃಶ್ಯ ಕಂಡು ಬಂದಿತು.ಹೌದು ಮೊಹರಂ ಹಬ್ಬದಲ್ಲಿ ಹಣ ವನ್ನು ತೂರಾಟ ಮಾಡಲಾಗಿದೆ.

ಧಾರವಾಡದ ಗರಗ ಗ್ರಾಮದಲ್ಲಿ ಮೊಹರಂ ಹಬ್ಬದಲ್ಲಿ ಹಣ ತೂರಾಟ ಮಾಡಿದ್ದು ಈಗ ವಿಡಿಯೋ ವೈರಲ್ ಆಗಿದೆ. ಹಾಡು ಹಾಡುವಾಗ ಮೆರವಣಿಗೆಯಲ್ಲಿ ಗಾಯಕನ ಮೇಲೆ ಹಣವನ್ನು ಬೇಕಾ ಬಿಟ್ಟಿಯಾಗಿ ತೂರಾಟ ಮಾಡಲಾಗಿದೆ. ನಗರದ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಹಣ ತೂರಾಟವನ್ನು ಮಾಡಿದ್ದು ತೆರೆದ ವಾಹನದಲ್ಲಿ ಗಾಯಕ ಹಾಡುವಾಗ ಇಸ್ಮಾಯಿಲ್ ತಮಾಟ ಗಾರ ಬೆಂಬಲಿಗರಿಂದ ಹಣ ತೂರಾಟ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ

ಹಾಡನ್ನು ಹಾಡುವಾಗ ಗಾಯಕನ ಮೇಲೆ ಇಸ್ಮಾಯಿಲ್ ತಮಟಗಾರ ಹಿಂದೆ ನಿಂತುಕೊಂಡಿರುವ ಬೆಂಬಲಿಗನೊಬ್ಬ ಹಣವನ್ನು ತೂರಾಡಿದ್ದಾನೆ.ಹಣ ತೂರಾಡುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ

ಇನ್ನೂ ಈಗಾಗಲೇ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಚುನಾ ವಣೆ ಗಮನ ದಲ್ಲಿಟ್ಟುಕೊಂಡು ಕ್ಷೇತ್ರದಲ್ಲಿ ಸುತ್ತಾಡುತ್ತಿರುವ ಇಸ್ಮಾಯಿಲ್ ತಮಾಟಗಾರ ಬೃಹತ್ ಜನ ಜಂಗುಳಿಯ ಎದುರಗೆ ಗಾಯ ಕನ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಹಣ ತೂರಾಟವನ್ನು ಮಾಡಿದ್ದು ಈಗ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ಇಸ್ಮಾಯಿಲ್ ತಮಾಟಗಾರ ಅವರ ಹಿಂದೆ ನಿಂತು ಕೊಂಡು ಹಣ ತೂರಿದವರು ಯಾರು ಎಂಬ ಪ್ರಶ್ನೆ ಗಳು ಕಾಡುತ್ತಿದ್ದು ಪೊಲೀಸರು ಏನು ಮಾಡತಾರೆ ಎಂಬೊಂದನ್ನು ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.