ಮೂಲಭೂತ ಸೌಕರ್ಯ ಒದಗಿಸಲು ಶಾಸಕರ ವೈಫಲ್ಯ ನಾಳೆ ವಿನೂತನ ಪ್ರತಿಭಟನೆ ಮನವಿ ಮಾಡಿ ವರ್ಷ ಕಳೆದರೂ ಸ್ಪಂದಿಸದ ಶಾಸಕರ ವಿರುದ್ಧ ರಜತ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಮತ್ತೊಂದು ಹೋರಾಟ…..

Suddi Sante Desk

ಹುಬ್ಬಳ್ಳಿ –

ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಹಾಗೂ ಶಾಸಕರ ವೈಫಲ್ಯವನ್ನು ಖಂಡಿಸಿ ನಾಳೆ ಹುಬ್ಬಳ್ಳಿ ಯಲ್ಲಿ ಕೈ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿ ಮಠ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ಕಾರ್ಯಕ್ರಮ ನಡೆಯಲಿದೆ.ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ವಾರ್ಡ್ ನಂಬರ್ 58 ರಲ್ಲಿ ಪ್ರತಿಷ್ಠಿತ ಓಂ ಹೋಟೆಲ್ ಎದುರುಗಡೆ ಕೇಕ್ ಕಾರ್ನರ್ ದಿಂದ ಸೈಂಟ್ ಮೈಕಲ್ ಸ್ಕೂಲ್ ಹತ್ತಿರದ ಎಸ್ ಬಿ ಐ ಬ್ಯಾಂಕ್ ನವರಿಗೆ ರಸ್ತೆ ದುರಸ್ತಿಗಾಗಿ ಸಾರ್ವಜನಿಕರಿಂದ ವಿನೂತನ ಪ್ರತಿಭಟನೆ ಮಾಡಲಾಗುತ್ತದೆ

ನಾಳೆ ಬುಧವಾರ ದಿನಾಂಕ 27 ಏಪ್ರಿಲ್ ರಂದು ಬೆಳಿಗ್ಗೆ 10.30 ಗಂಟೆಗೆ ಈ ಒಂದು ಹೋರಾಟ ಪ್ರತಿಭಟನಾ ಕಾರ್ಯಕ್ರಮ ನಡೆಯಲಿದ್ದು ಇನ್ನೂ ವಿಶೇಷ ಎಂದರೆ ಈ ಒಂದು ಬೇಡಿಕೆ ಕುರಿತು ಒಳಚರಂಡಿ ಕಾಮಗಾರಿ ಮಾಡಿ ಒಂದು ವರ್ಷ ಗತಿಸಿದರೂ ಹಲವಾರು ಅರ್ಜಿಗಳನ್ನು ಶಾಸಕರಾದ ಜಗದೀಶ್ ಶೆಟ್ಟರ್ ಅವರಿಗೆ ಸಾರ್ವಜನಿಕರು ಮನವಿ ಮಾಡಿದರು ರಸ್ತೆ ದುರಸ್ತಿ ಕೈಗೊಂಡಿಲ್ಲವಂತೆ ಹೀಗಾಗಿ ಮತ್ತೆ ಈ ಒಂದು ಪ್ರತಿಭಟನೆ ಯನ್ನು ಮಾಡಲಾಗುತ್ತಿದೆ ಎಂದು ಕೈ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಹೇಳಿದ್ದಾರೆ‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.