ಧಾರವಾಡದಲ್ಲಿ ರೈತ ಆತ್ಮಹತ್ಯೆ ಮನೆಯ ಮುಂದೆ ನೇಣಿಗೆ ಶರಣಾದ ರೈತ ರಾಮಂಚಂದ್ರ ಓಲೆಕಾರ್…..

Suddi Sante Desk

ಧಾರವಾಡ –

ಸಾಲಬಾಧೆಯಿಂದ ಬೇಸತ್ತು ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.ಹೌದು ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ರಾಮಚಂದ್ರ ಓಲೆಕಾರ್ (65)ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಇನ್ನೂ ರೈತ ರಾಮಚಂದ್ರ 14 ಲಕ್ಷ ರೂಪಾಯಿ ಟ್ಯಾಕ್ಟರ್ ಸಾಲ ಮತ್ತು ಬೆಳೆ ಸಾಲ ವನ್ನು ಬ್ಯಾಂಕ್ ನಲ್ಲಿ ಮಾಡಿಕೊಂಡಿದ್ದರು.

4 ಎಕರೆ ಜಮೀನು ಹೊಂದಿರುವ ರೈತ ರಾಮಚಂದ್ರ. ಮನೆಯ ಮುಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನೂ ಸುದ್ದಿ ತಿಳಿದ ಗರಗ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.