ಕ್ಯಾರಕೊಪ್ಪ ಗ್ರಾಮದಲ್ಲಿ ನೀರು ಪಾಲಾದ ತಂದೆ ಮಗ – ಟಂಟಂ ವಾಹನ ತೊಳೆಯಲು ಹೋಗಿ ನೀರಿನಲ್ಲಿ ಕಾಲು ಜಾರಿ ಸಾವು…..

Suddi Sante Desk

ಧಾರವಾಡ –

ಟಂಟಂ ವಾಹನವನ್ನು ತೊಳೆಯಲು ಹೋಗಿ ತಂದೆ ಮಗ ಇಬ್ಬರು ನೀರು ಪಾಲಾದ ಘಟನೆ ಧಾರವಾಡದಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ.ಧಾರವಾಡ ಕ್ಯಾರಕೊಪ್ಪ ಗ್ರಾಮದ ನವೋದಯ ಶಾಲೆಯ ಪಕ್ಕದಲ್ಲಿನ ಕೆರೆಯಲ್ಲಿ ಈ ಒಂದು ಘಟನೆ ನಡೆದಿದೆ.

ಗದಿಗೆಪ್ಪ ಅಂಗಡಿ ಹಾಗೂ ರವಿ ಅಂಗಡಿ ಸಾವನ್ನಪ್ಪಿದ ತಂದೆ ಮಗ ಆಗಿದ್ದಾರೆ.ಬೆಳಿಗ್ಗೆ ಕೆರೆಗೆ ಟಂ ಟಂ ವಾಹನ ತೊಳೆಯಲು ಕೆರೆಗೆ ಇಳಿದಿದ್ದರು ಈ ಒಂದು ವೇಳೆ ಜಾರಿ ಕೆರೆ ಒಳಗೆ ಹೋಗಿದ್ದಾರೆ ಇಬ್ಬರು.ಇನ್ನೂ ಸುದ್ದಿ ತಿಳಿದ ಸ್ಥಳೀಯರು ಕೂಡಲೇ ಧಾವಿಸಿ ಸ್ಥಳಕ್ಕೆ ಆಗಮಿಸಿ ಕೆರೆ ಯಲ್ಲಿ ಕಾರ್ಯಾಚರಣೆ ಮಾಡಿದರು ತಂದೆ ಗದಿಗೆಪ್ಪ ಶವ ಪತ್ತೆಯಾಗಿದ್ದು ರವಿ ಶವಕ್ಕಾಗಿ‌ ಹುಡುಕಾಟವನ್ನು ಮಾಡು ತ್ತಿದ್ದು ಸಿಕ್ಕಿದೆ

ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು ಈ ಕುರಿತಂತೆ ಪೊಲೀಸರು ದೂರನ್ನು ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮ ವನ್ನು ಕೈಗೊಂಡಿದ್ದು ಇತ್ತ ತಂದೆ ಮಗನನ್ನು ಕಳೆದುಕೊಂಡಿ ರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.