ವಿರೇಶ ಸೊಬರದಮಠ ಸ್ವಾಮಿಜಿ – ಪೂರ್ವಾಶ್ರಮದ ತಂದೆ ನಿಧನ

Suddi Sante Desk

ನವಲಗುಂದ –

ಕಳಸಾ ಬಂಡೂರಿ ಹೋರಾಟದ ಮುಖಂಡ ರಾಜ್ಯ ರೈತಸೇನಾ ಕರ್ನಾಟಕದ ಅಧ್ಯಕ್ಷ ಸ್ವಾಮಿಜಿ ವಿರೇಶ ಸೊಬರದಮಠ ತಂದೆ ನಿಧರಾಗಿದ್ದಾರೆ. ಚಂದ್ರಶೇಖರಯ್ಯ ಸೊಬರದಮಠ (80) ಇಂದು ಲಿಂಗೈಕ್ಯರಾದರು. ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಆದರೆ ಇಂದು ಆರೋಗ್ಯದಲ್ಲಿ ಏರುಪೇರಾಗಿ ಕೊನೆಗೆ ಉಸಿರೆಳಿದ್ದಾರೆ.ಇನ್ನೂ ಮಹಾದಾಯಿ ಹೋರಾಟದ ಮುಂಚೂಣಿಯಲ್ಲಿರುವ ಸ್ವಾಮಿಜಿ ವೀರೇಶ ಸೊಬರದಮಠ ಪೂರ್ವಾಶ್ರಮದ ತಂದೆಯವರಾದ ವೇದಮೂರ್ತಿಗಳಾಗಿದ್ದಾರೆ.

ಇನ್ನೂ ಮೃತರ ಅಂತ್ಯಕ್ರೀಯೆಯು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮದಲ್ಲಿ ದಿನಾಂಕ 18-11-2020 ಮಧ್ಯಾಹ್ನ 12.30 ಕ್ಕೆ ನೆರೆವೆರಲಿದೆ. ಮೃತರು ಸ್ವಾಮಿಜಿಯರಾದ ವಿರೇಶ ಸೊಬರದಮಠ ಸೇರಿದಂತೆ ಮೂರು ಜನ ಗಂಡು ಮಕ್ಕಳು ಒರ್ವ ಹೆಣ್ಣು ಮಗಳು ಮತ್ತು ಪತ್ನಿಯನ್ನು ಅಗಲಿದ್ದಾರೆ.ಇನ್ನೂ ಅಗಲಿದ ಹಿರಿಯ ಜೀವಿಗಳ ನಿಧನಕ್ಕೇ ಕಳಸಾ ಬಂಡೂರಿ ಹೋರಾಟಗಾರರು ಸೋಬರದಮಠ ಆಪ್ತರು ಸ್ನೇಹಿತರು ತೀರ್ಲಾಪೂರ ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಕಂಬನಿ ಮೀಡಿದಿದ್ದು ಶೋಕದ ವಾತಾವರಣ ಕಂಡುಬರುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.