ಪಾಟ್ನಾ –
ಶಾಲೆಯೊಂದರ ಪ್ರಾಂಶುಪಾಲರಾಗಲು ಶಿಕ್ಷಣ ಇಲಾಖೆ ಯಲ್ಲಿ ಇಬ್ಬರು ಹೊಡೆದಾಟ ಮಾಡಿದ ಪಾಟ್ನಾ ದಲ್ಲಿ ನಡೆದಿದೆ.ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಶಿವಶಂಕರ್ ಗಿರಿ ಮತ್ತು ರಿಂಕಿ ಕುಮಾರಿ ಅವರು ಬಿಹಾರ ರಾಜ್ಯದ ಅಡಾಪುರ ಪ್ರದೇಶದ ಪ್ರಾಥಮಿಕ ಶಾಲೆಯಲ್ಲಿ ಪ್ರಿನ್ಸಿಪಾಲ್ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.ಸುಮಾರು ಮೂರು ತಿಂಗಳಿನಿಂದ ಇಬ್ಬರೂ ಜಗಳವಾಡುತ್ತಿದ್ದರು. ಯಾರು ವೃತ್ತಿಪರ ಜೇಷ್ಠತೆಯನ್ನು ಹೊಂದಿದ್ದಾರೆ ಮತ್ತು ಪ್ರಾಂಶುಪಾಲರ ಸ್ಥಾನಕ್ಕೆ ಹೆಚ್ಚು ಅರ್ಹತೆ ಹೊಂದಿದ್ದಾರೆ ಎಂಬ ವಿಷಯದ ಬಗ್ಗೆ ಅವರ ನಡುವೆ ವಾಗ್ವಾದ ಜಗಳ ನಡೆದಿದೆ.
ಶಿವಶಂಕರ್ ಗಿರಿ ಮತ್ತು ರಿಂಕಿ ಕುಮಾರಿ ನಡುವಿನ ಸ್ಪರ್ಧೆಯ ದುರದೃಷ್ಟಕರ ಫಲಿತಾಂಶವು ದೈಹಿಕ ಹಲ್ಲೆಯ ಮಟ್ಟಕ್ಕೆ ಬಂದಿದೆ.ಅವರ ಶಿಕ್ಷಣ ಮತ್ತು ಇತರ ದಾಖಲೆ ಗಳನ್ನು ಸಲ್ಲಿಸುವಂತೆ ಜಿಲ್ಲಾ ಶಿಕ್ಷಣ ಇಲಾಖೆಯ ಹೇಳಿದ ನಂತರ ಇದು ಸ್ಫೋಟಗೊಂಡಿದೆ.
ಮೋತಿಹರಿಯಲ್ಲಿರುವ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಯಾರು ಮೊದಲು ದಾಖಲೆಗಳನ್ನು ನೀಡುತ್ತಾರೆ ಎಂಬು ದರ ಕುರಿತಾಗಿ ಇಬ್ಬರು ಶಿಕ್ಷಕರು ಜಗಳವಾಡಿದ್ದಾರೆ. ಕೋಪ ಗೊಂಡ ರಿಂಕಿ ಕುಮಾರಿಯ ಪತಿ ಶಿವಶಂಕರ್ ಗಿರಿ ಅವರನ್ನು ಹೊಡೆದು ಮುಷ್ಟಿಯಿಂದ ಗುದ್ದಿದ್ದಾನೆ. ಘಟನೆ ಯ ವಿಡಿಯೋ ವೈರಲ್ ಆಗಿದ್ದು ನಂತರ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮಕೈಗೊಂಡಿದ್ದಾರೆ.