ಎರಡು ಕಾರುಗಳ ನಡುವೆ ಭೀಕರ ಅಫಘಾತ ಐದು ಜನರು ಸಾವು – ಇನ್ನೋವಾ ಮತ್ತು ಮಾರುತಿ ಸ್ವಿಫ್ಟ್ ಕಾರುಗಳ ನಡುವೆ ಅಪಘಾತ.

Suddi Sante Desk
ಎರಡು ಕಾರುಗಳ ನಡುವೆ ಭೀಕರ ಅಫಘಾತ ಐದು ಜನರು ಸಾವು – ಇನ್ನೋವಾ ಮತ್ತು ಮಾರುತಿ ಸ್ವಿಫ್ಟ್ ಕಾರುಗಳ ನಡುವೆ ಅಪಘಾತ.

ಮಂಡ್ಯ

ಎರಡು ಕಾರುಗಳ ನಡುವೆ ಭೀಕರ ಅಫಘಾತ ಸಂಭವಿಸಿ ಐವರು ಮೃತರಾದ ಘಟನೆ ಮಂಡ್ಯ ದಲ್ಲಿ ನಡೆದಿದೆ. ಇನ್ನೋವಾ ಮತ್ತು ಮಾರುತಿ ಸ್ವಿಫ್ಟ್ ಕಾರುಗಳ ನಡುವೆ ಈ ಒಂದು ಅಪಘಾತ  ಸಂಭವಿಸಿದ್ದು ಸ್ಥಳದಲ್ಲೇ ಕಾರಿನಲ್ಲಿದ್ದ ಐವರು ದುರ್ಮರಣವಾಗಿದ್ದಾರೆ.

ಐವರು ಸಾವಿಗೀಡಾಗಿದ್ದರೆ ಮೂವರಿಗೆ ಗಾಯ ಗಳಾಗಿದ್ದು ಇನ್ನೋವಾ ಮತ್ತು ಮಾರುತಿ ಸ್ವಿಫ್ಟ್ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯ ಎ.ನಾಗತಿಹಳ್ಳಿ ಬಳಿ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ.ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದ್ದು ಸ್ಥಳಕ್ಕೆ ಸಿಪಿಐ ಸುಧಾಕರ್, ಬಿಂಡಿಗನವಿಲೆ ಪೊಲೀಸ್ ಠಾಣೆ ಅಧಿಕಾರಿಗಳು,ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದರು.ಭಾನುವಾರ ಹಿನ್ನೆಲೆ ಹೆದ್ದಾರಿಯಲ್ಲಿ ಹೆಚ್ಚಿದ್ದ ವಾಹನ ದಟ್ಟಣೆ ಇತ್ತು

ಬೆಂಗಳೂರಿನಿಂದ ಹೊರಟಿದ್ದ ಇನ್ನೋವಾ. ಹಾಸನ ಕಡೆಯಿಂದ ಹೊರಟಿದ್ದ ಸ್ವಿಫ್ಟ್. ಇನ್ನೋ ವಾದಲ್ಲಿದ್ದ ಮೂವರು,ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರ ಸಾವಿಗೀಡಾಗಿದ್ದಾರೆ.ಇನ್ನೋವಾದಲ್ಲಿದ್ದ ದಂಪತಿ ಕೃಷ್ಣಮೂರ್ತಿ(66), ಜಯಂತಿ(60), ಚಾಲಕ ಪ್ರಭಾಕರ್ ಸಾವಿಗೀಡಾಗಿದ್ದು ಸ್ವಿಫ್ಟ್ ನಲ್ಲಿದ್ದ ಕಿಶೋರ್ ಸೇರಿದಂತೆ ಇಬ್ಬರ ದುರ್ಮರಣ ವಾಗಿದ್ದಾರೆ.ಮೂವರು ಗಾಯಾಳುಗಳಿಗೆ ಆದಿಚುಂಚನಿಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಯನ್ನು ನೀಡಲಾಗುತ್ತಿದೆ.ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸುದ್ದಿ ಸಂತೆ ನ್ಯೂಸ್ ಮಂಡ್ಯ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.