ಕೇಂದ್ರ ಮಾದರಿಯ ವೇತನ ಸಮಿತಿ ಘೋಷಣೆಯ ಮುನ್ನವೇ ಅಪಸ್ವರ – ಹೈಕೋರ್ಟ್ ನ್ಯಾಯಮೂರ್ತಿ ಗಳ ನೇತೃತ್ವದಲ್ಲಿ ಆಯೋಗ ಸಮಿತಿ ರಚಿಸಿ ಇಲ್ಲವಾದರೆ ಸೆಪ್ಟೆಂಬರ್ 30 ರಿಂದ ಹೋರಾಟ…..

Suddi Sante Desk

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯ ವೇತನ ನೀಡುವ ವಿಚಾರ ದಲ್ಲಿ ನಿವೃತ್ತ ಅಧಿಕಾರಿಗಳ ನೇತೃತ್ವದಲ್ಲಿ ವೇತನ ಆಯೋಗ ರಚನೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತವಾಗಿದೆ‌.ಈ ಒಂದು ವಿಚಾರ ಕುರಿತು ಸಚಿವಾಲಯದ ನೌಕರರ ಸಂಘ ವಿರೋಧ ವ್ಯಕ್ತಪಡಿಸಿದೆ.ನಿವೃತ್ತ ಅಧಿಕಾರಿ ಗಳ ನೇತೃತ್ವದಲ್ಲಿ ಬೇಡ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಆಯೋಗ ರಚನೆ ಮಾಡಬೇಕು.ವಿಜಯ ಭಾಸ್ಕರ್ ನೇತೃತ್ವದ ಸಮಿತಿ ನೀಡಿರುವ ವರದಿ ಆಧಾರದಲ್ಲಿ ಖಾಲಿ ಹುದ್ದೆ ರದ್ದು ಪಡಿಸಲು ಮುಂದಾಗಿದೆ.ಅದನ್ನು ಖಂಡಿಸಲಾಗುವುದು ಎಂದು ಸಚಿವಾಲಯದ ನೌಕರರ ಸಂಘ ಆಕ್ರೋಶ ಹೊರ ಹಾಕಿದೆ.

ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ ಸರ್ಕಾರದ ಧೋರಣೆ ವಿರುದ್ಧ ಸೆಪ್ಟೆಂಬರ್ 30 ರಂದು ಧರಣಿ ನಡೆಸಲಾಗುವುದು.ನಿವೃತ್ತ ಐಎಎಸ್ ಅಧಿಕಾರಿಗಳ ಬೂಟಾಟಿಕೆಯ ಸಮಿತಿ ಬೇಡ.ಸರ್ಕಾರಿ ನೌಕರರು ಗುಲಾಮರಲ್ಲ.ನಾವು ಅರ್ಹತೆಯ ಮೇಲೆ ಉದ್ಯೋಗ ಪಡೆದುಕೊಂಡಿದ್ದೇವೆ.ಸರ್ಕಾರ ನೌಕರರ ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು

ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಜಯಕು ಮಾರ್ ಮಾತನಾಡಿ ಅಕ್ಕಪಕ್ಕದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೌಕರರ ವೇತನ ರಾಜ್ಯ ಸರ್ಕಾರಿ ನೌಕರರ ವೇತನಕ್ಕೂ ಶೇ 40% ರಷ್ಟು ವ್ಯತ್ಯಾಸ ಇದೆ.ನಾವು ಈಗಾ ಗಲೇ ಮೂರ್ನಾಲ್ಕು ವೇತನ ಆಯೋಗಗಳನ್ನು ಕಳೆದು ಕೊಂಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಒಂದು ಸಾವಿರ ಜನರಿಗೆ 18-20 ನೌಕರರಿದ್ಧರೆ ನಮ್ಮ ರಾಜ್ಯದಲ್ಲಿ 11 ಜನ ಇದ್ದಾರೆ. ಸರ್ಕಾರ ಹೊಸ ಹೊಸ ಯೋಜನೆ ಘೋಷಣೆ ಮಾಡು ತ್ತಿದೆ. ಇದರಿಂದ ನೌಕರರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.