ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾರು ಅಪಘಾತ ಹೆದ್ದಾರಿ ಪಕ್ಕದ ನಾಲೆಗೆ ಉರುಳಿ ಬಿದ್ದ ಕಾರು ಪ್ರಾಣಾಪಾಯದಿಂದ ಪಾರಾದ ಲಕ್ಷ್ಮಣ ಸವದಿ…..

Suddi Sante Desk

ಚಿಕ್ಕೋಡಿ –

ಹೌದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಬೆಳಗಾವಿ ಯಲ್ಲಿ ಕಾರು ಅಪಘಾತವಾಗಿದ್ದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಸೇರಿದಂತೆ ಹಲವರು ಈ ಒಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಕಾರು ಅಪಘಾತದಲ್ಲಿ ಲಕ್ಷ್ಮಣ ಸವದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಜತ್ ಜಾಂಬೋಟಿ ಅಂತರರಾಜ್ಯ ರಾಜ್ಯ ಹೆದ್ದಾರಿಯ ಹಾರೂಗೇರಿ ಪಟ್ಟಣದ ಬಳಿ ಅಪಘಾತ ಸಂಭವಿಸಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ನಡೆದಿದೆ ಈ ಒಂದು ಅಪಘಾತ. ಅಥಣಿಯಿಂದ ಬೆಳಗಾವಿ ಕಡೆಗೆ ಹೊರಟಿದ್ದ ಸವದಿಯವರ ಕಾರು.

ಪ್ರಾಣಾಪಾಯದಿಂದ ಪಾರಾಗಿದ್ದಾರೆ ಲಕ್ಷ್ಮಣ ಸವದಿ ಅವರು.ಕಾರು ಅಪಘಾತ ಆಗುತ್ತಿದಂತೆ ಸ್ಥಳೀಯರಿಂದ ರಕ್ಷಣಾ ಕಾರ್ಯವನ್ನು ಮಾಡಿದ್ದಾರೆ.ಬೈಕ್ ಸವಾರ ಅಡ್ಡ ಬಂದಿದ್ದು ಸವಾರನನ್ನ ತಪ್ಪಿಸಲು ಹೋಗಿ ಅವಘಡ ಸಂಭವಿಸಿದ್ದು ತಿರುವಿನ ಅಂಚಿನಲ್ಲಿ ರಸ್ತೆ ಪಕ್ಕದ ನಾಲೆ ಯಲ್ಲಿ ಪಲ್ಟಿಯಾಗಿದೆ ಕಾರ್ ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣ ಹಾಣಿಯಾಗಿಲ್ಲ ಕಾರಿನಲ್ಲಿದ್ದ ಎಲ್ಲರೂ ಸೇಪ್ ಆಗಿದ್ದು ಸ್ಥಳಕ್ಕೆ ಹಾರೂಗೇರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.