ನವದೆಹಲಿ –
ಹುಬ್ಬಳ್ಳಿ ಧಾರವಾಡ ನಡುವಿನ ಕಿಲ್ಲರ್ ಹೆದ್ದಾರಿ ಅಗಲಿಕರಣಕ್ಕೆ ಕೊನೆಗೂ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಡರಿ ಹಸಿರು ನಿಶಾನೆ ನೀಡಿದ್ದಾರೆ. ಹೌದು ಹುಬ್ಬಳ್ಳಿ ಧಾರವಾಡ ಹೊರವಲಯ ದಲ್ಲಿನ ಹೆದ್ದಾರಿ ಅಂದರೆ ಪ್ರಯಾಣಿಸಲು ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಹೋಗುವ ಪರಸ್ಥಿತಿ ಮೇಲಿಂದ ಮೇಲೆ ಇಲ್ಲಿ ಸಾಲು ಸಾಲಾಗಿ ಅಪಘಾತಗಳು ನಡೆಯುತ್ತಿದ್ದು ಇದನ್ನು ಗಂಭೀರ ವಾಗಿ ಪರಿಗಣಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಹಿಂದೆ ಈ ಒಂದು ಹೆದ್ದಾರಿಗೆ ನಿತೀನ್ ಗಡ್ಡರಿ ಅವರಿಂದ ವೀಕ್ಷಣೆಯನ್ನು ಮಾಡಿಸಿ ಕಾಮಗಾರಿ ಮಾಡಿಸುವ ಕುರಿತಂತೆ ಪ್ಲಾನ್ ಮಾಡಿಸಿ ಚಾಲನೆ ನೀಡಿಸಿದ್ದರು.
ಇದೇಲ್ಲದರ ನಡುವೆ ಈಗ ಅವಳಿ ನಗರದ ಜನತೆಯ ಅದರಲ್ಲೂ ಇಲ್ಲಿ ಜೀವವನ್ನು ಕೈಯಲ್ಲಿ ಟ್ಟುಕೊಂಡು ಪ್ರಯಾಣಿಸುವ ಪ್ರಯಾಣಿಕರ ಆಸೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈಡೇರಿಸುತ್ತಿದ್ದಾರೆ.ಹೌದು ಅವಳಿ ನಗರದ ಜನತೆಯ ಬಹುದಿನಗಳ ಬೇಡಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಈ ಒಂದು ಯೋಜನೆಗೆ ಸಿಕ್ಕಿತು ಅನುಮೋದನೆ.
ಇದರೊಂದಿಗೆ ಈಡೇರಲಿದೆ ಅವಳಿ ನಗರದ ಜನತೆಯ ಬಹು ದಿನಗಳ ಬೇಡಿಕೆ.ಹುಬ್ಬಳ್ಳಿ-ಧಾರವಾಡ ಬೈ ಪಾಸ್ ರಸ್ತೆ ಅಗಲೀಕರಣ ಸಾರ್ವಜನಿಕರ ಅನುಕೂಲಕದ ದೃಷ್ಟಿಯಿಂದ ಮುಖ್ಯ ವಿಷಯವಾಗಿದ್ದು ನವ ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಡರಿ ಅವರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತ್ರತ್ವದಲ್ಲಿನ ನಿಯೋ ಈ ಕುರಿತು ಚರ್ಚೆ ನಡೆಸಿದರು.
ರಸ್ತೆ ಅಗಲೀಕರಣದ ಟೆಂಡರ್ ಗೆ ಈಗಾಗಲೇ ಅನುಮೋದನೆ ದೊರಕಿದ್ದು ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸುವಂತೆ ಸಚಿವರು ನಿರ್ದೇಶನ ಕೂಡ ನೀಡಿದ್ದಾರೆ.
ಈ ರಸ್ತೆ ಅಭಿವೃದ್ಧಿ ಕಾರ್ಯಗಳು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಿವೆ.ಇದೇ ಸಮಯದಲ್ಲಿ ಅವಳಿ ನಗರದ ಸುತ್ತಲಿರುವ ಚತುಷ್ಪಥ ಮತ್ತು ಷಟ್ಪಥ ರಸ್ತೆಗಳಿಗೆ ಅಂಡರ್ ಪಾಸ್ ಗಳ ನಿರ್ಮಾಣ ಮಾಡಿಕೊಡುವುದಾಗಿ ಕೂಡ ಭರವಸೆಯನ್ನು ಸಚಿವರು ನೀಡಿದರು.ಈ ಒಂದು ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ರಾಜ್ಯದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್…..