ರಾಜ್ಯದ ಸರ್ಕಾರಿ ನೌಕರರಿಗೆ ಸೆಪ್ಟೆಂಬರ್ 6 ರಂದು ಸಿಗಲಿದೆ ಗುಡ್ ನ್ಯೂಸ್ ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ದಿನ…..

Suddi Sante Desk

ಬೆಂಗಳೂರು –

ಹೌದು ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ನೀಡುವ ಕುರಿತು ಸಮಿತಿ ರಚನೆ ಮಾಡುವ ವಿಚಾರ ದಲ್ಲಿ ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರು ಸೆಪ್ಟೆಂಬರ್ 6 ರಂದು ಸಭೆಯನ್ನು ಕರೆದಿದ್ದಾರೆ.

ಈ ಒಂದು ಸಭೆಯಲ್ಲಿ ಪ್ರಮುಖವಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ಸೇರಿದಂತೆ ಹಲವಾರು ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದ್ದು ಅಂದೇ ಮುಖ್ಯಮಂತ್ರಿ ಈ ಒಂದು ವಿಚಾರ ಕುರಿತು ಘೋಷಣೆ ಮಾಡಿದರೆ ಒಂದು ವಿಚಾರ ಮಾಡದಿದ್ದರೆ ಸಭೆಯಲ್ಲಿ ಪ್ರಮುಖವಾದ ನಿರ್ಣಯವನ್ನು ತಗೆದುಕಕೊ ಳ್ಳಲಿದ್ದು ಇದರೊಂದಿಗೆ ಈ ಒಂದು ಸಭೆಯಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಾ ಭಾಗವಹಿಸಲಿದ್ದಾರೆ

ಅಂದು ರಾಜ್ಯದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರಧಾನ ಸಮಾರಂಭ ವಿದ್ದು ಹೀಗಾಗಿ ಈ ಒಂದು ಕಾರ್ಯಕ್ರಮ ದಲ್ಲಿಯೇ ಮುಖ್ಯಮಂತ್ರಿ ಅವರು ವೇತನ ಸಮಿತಿ ರಚನೆಯನ್ನು ಘೋಷಣೆ ಮಾಡಲಿದ್ದಾರೆ ಎಂಬ ಮಾಹಿತಿ ಸುದ್ದಿ ಸಂತೆ ಗೆ ಲಭ್ಯವಾಗಿದೆ

ಇವೆಲ್ಲದರ ನಡುವೆ ಈಗ ಸೆಪ್ಟೆಂಬರ್ 6 ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಗಲಿದ್ದು ಸಧ್ಯ ಈಗ ಎಲ್ಲರ ಚಿತ್ತ ಸೆಪ್ಟೆಂಬರ್ 6 ರ ಸಭೆಯತ್ತ ಇದೆ.ಏನೇ ಆಗಲಿ ಸೆಪ್ಟೆಂಬರ್ 6 ರಂದು ಗೌರಿ ಗಣೇಶ ಹಬ್ಬಕ್ಕೆ ಸಿಗಲಿ ಎಂಬೊದೆ ನಮ್ಮ ಆಶಯವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.