ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಡಾ ಸುಧಾಕರ್ ರಾವ್ ನೇತ್ರತ್ವದಲ್ಲಿ 3 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಾಜ್ಯ ಸರ್ಕಾರ ನೇಮಿಸಿದೆ.ಈ ಕುರಿತಂತೆ ಈಗಾಗಲೇ ಸಮರ್ಪಕವಾದ ಆದೇಶ ವನ್ನು ಕೂಡಾ ಹೊರಡಿಸಿದ್ದು ಅಧ್ಯಕ್ಷರೊಂದಿಗೆ ಆರಂಭದಲ್ಲಿ ಮೂವರು ಸದಸ್ಯರನ್ನು ನೇಮಕ ಮಾಡಲಾಗಿದ್ದು ಸಮಿತಿಗೆ ಈಗಾಗಲೇ ಕಚೇರಿ ಯನ್ನು ನೀಡಲಾಗಿದ್ದು ಇದರ ಬೆನ್ನಲ್ಲೇ ಈ ಒಂದು ಆಯೋಗದ ಸಮಿತಿಗೆ ಕೆಲಸ ಕಾರ್ಯವನ್ನು ಮಾಡುವ ನಿಟ್ಟಿನಲ್ಲಿ ಹಾಗೇ ವೇಗವಾಗಿ ಕೆಲಸ ಗಳು ನಡೆಯಲಿ ಎಂಬ ಒಂದು ಉದ್ದೇಶದಿಂದಾಗಿ ಸಧ್ಯ ರಾಜ್ಯ ಸರ್ಕಾರ 44 ಸಿಬ್ಬಂದಿಗಳನ್ನು ಸಮಿತಿಗೆ ನೀಡಿ ಆದೇಶವನ್ನು ನೀಡಿದೆ ಹೌದು
ಕಾರ್ಯದರ್ಶಿ ಹುದ್ದೆ 1 ಐಎಎಸ್ ವೃಂದ
ಅಪರ,ಜಂಟಿ,ಉಪಕಾರ್ಯದರ್ಶಿ,ವಿಶೇಷಾಧಿಕಾರಿ ಹುದ್ದೆ 3 ಜಂಟಿ,ಉಪ,ಸಹಾಯಕ ನಿರ್ದೇಶ ಕರು,ಅಂಕಿ ಅಂಶ ಹುದ್ದೆ 1, ಅಧೀನ ಕಾರ್ಯದರ್ಶಿ,ಆಪ್ತ ಕಾರ್ಯದರ್ಶಿ ಹುದ್ದೆ 6,ಶಾಖಾಧಿಕಾರಿ ಹುದ್ದೆ 3
ಹಿರಿಯ ಸಹಾಯಕರು, ಸಹಾಯಕರು, ಶೀಘ್ರಲಿ ಪಿಗಾರರು,ಹಿರಿಯ ಸಹಾಯಕರು, ಬೆರಳಚ್ಚು ಗಾರರು,ಡಾಟಾ ಎಂಟ್ರಿ ಆಪರೇಟರ್ ಹಾಗೂ ಗ್ರೂಪ್ ಸಿ ವೃಂದದ ಹುದ್ದೆಗಳು 25
ದಲಾಯತ್ ಹುದ್ದೆಗಳು 6
ಹೀಗೆ ಒಟ್ಟು 44 ಸಿಬ್ಬಂದಿಗಳನ್ನು ಹೊಸದಾಗಿ ಸಮಿತಿಗೆ ರಾಜ್ಯ ಸರ್ಕಾರ ನೀಡಿ ಆದೇಶವನ್ನು ಹೊರಡಿಸಿದೆ.ಇದರೊಂದಿಗೆ ಸಮಿತಿಯು ಕಾರ್ಯ ಚಟುವಟಿಕೆಗಳನ್ನು ತೀವ್ರವಾಗಿ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಒಂದು ಸಿಬ್ಬಂದಿಗಳನ್ನು ರಾಜ್ಯ ಸರ್ಕಾರ ನೀಡಿದ್ದು ಇದರೊಂದಿಗೆ ಕಾರ್ಯ ಚಟುವಟಿಗಳು ಮತ್ತಷ್ಟು ತೀವ್ರಗೊಳ್ಳಲಿವೆ.
ಸುದ್ದಿ ಸಂತೆ ನ್ಯೂಸ್…..