ಸರ್ಕಾರಿ ಶಾಲಾ ಶಿಕ್ಷಕ ಆತ್ಮಹತ್ಯೆ ಪತಿಯ ಆತ್ಮಹತ್ಯೆ – ಅನಾಥ ವಾಯಿತು ಶಿಕ್ಷಕನ ಕುಟುಂಬ…..

Suddi Sante Desk

ಮೇದಕ್ –

ಸರ್ಕಾರಿ ಶಾಲಾ ಶಿಕ್ಷಕನೊಬ್ಬ ರೇಲ್ವೆ ಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ನ ಮೇದಕ್ ನಲ್ಲಿ ನಡೆದಿದೆ.ಹೌದು ಶಿವ್ವಂಪೇಟೆ ಮಂಡಲದ ಚಿನ್ನ ಗೊಟ್ಟಿಮುಕ್ಕಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ರಾಮರಾವ್ (43) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನಾಗಿದ್ದಾರೆ.

ರಾಮರಾವ್ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ಚಿಪುರುಪಲ್ಲಿ ಮಂಡಲದ ಅಕುಲಾಪೇಟ್ ಗ್ರಾಮದವರಾಗಿದ್ದಾರೆ ಶನಿವಾರ ಮತ್ತು ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ರಾಮರಾವ್ ಶನಿವಾರ ಬೆಳಗ್ಗೆ ವಿಜಯನಗರಕ್ಕೆ ತೆರಳಿದ್ದರು.ಆದರೆ ಶನಿವಾರ ರಾತ್ರಿ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನೂ ಪತ್ನಿ ಚಿನ್ನ ಅಮ್ಮುಲು (37) ಮತ್ತು ಮಕ್ಕಳಾದ ಧನುಷ್(7)ಮತ್ತು ಪೂಜಾಶ್ರೀ (1) ಅವರೊಂದಿಗೆ ನರಸಾಪುರ ಪಟ್ಟಣದ ಶ್ರೀರಾಮನಗರ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಸಧ್ಯ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮಾಡತಾ ಇದ್ದಾರೆ.ಇನ್ನೂ ಈಗಾಗಲೇ ಆತ್ಮಹತ್ಯೆಗೆ ಕೌಟುಂಬಿಕ ಕಲಹಗಳು ರಾಮರಾವ್ ಅವರ ಸಾವಿಗೆ ಕಾರಣ ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ. ನರಸಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.