ತರಗತಿ ಬಹಿಷ್ಕಾರಕ್ಕೆ ಕರೆ ಕೊಟ್ಟ ಪದವೀಧರ ಶಿಕ್ಷಕರ ಸಂಘ – 6 – 8 ನೇ ತರಗತಿ ಬಹಿಷ್ಕಾರ ಹೋರಾಟ

Suddi Sante Desk

ಬೆಂಗಳೂರು –

ಬೇಡಿಕೆಗಳು ಈಡೇರದ ಹಿನ್ನಲೆಯಲ್ಲಿ ಕೊನೆಗೂ ಪದವೀ ಧರ ಶಿಕ್ಷಕರ ಸಂಘದಿಂದ 6-8 ತರಗತಿ ಬಹಿಷ್ಕಾರ ಮಾಡಿ ಹೋರಾಟಕ್ಕೆ ಕರೆ ಕೋಡಲಾಗಿದೆ.ಹೌದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ರಾಜ್ಯಾ ಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಹಿಂದೆ ನಡೆದ ಜಿಲ್ಲಾ,ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಗೂಗಲ್ ಸಭೆಯ ನಿರ್ಣಯದಂತೆ ಅಂತಿಮ ಹೋರಾಟವಾಗಿ 6-8 ತರಗತಿಗಳ ಬಹಿಷ್ಕಾರ ಮಾಡಲು ತಿರ್ಮಾನ ಮಾಡಿದ್ದು ಇದಕ್ಕೆ ರಾಜ್ಯದ ಎಲ್ಲಾ ಪದವೀಧರ ಶಿಕ್ಷಕರ ಬೆಂಬಲ ಅತಿ ಮುಖ್ಯವಾಗಿರುವುದರಿಂದ ತುರ್ತಾಗಿ ಜಿಲ್ಲಾ,ತಾಲ್ಲೂಕು ಪದವೀಧರ ಘಟಕಗಳು ಹೋರಾಟಕ್ಕೆ ತಮ್ಮ ತಾಲ್ಲೂಕಿ ನಿಂದ ಬೆಂಬಲ ನೀಡುವುದಾಗಿ ರಾಜ್ಯ ಘಟಕಕ್ಕೆ ಸ್ಷಷ್ಟತೆ ನೀಡಬೇಕಾಗಿದೆ

ಹೌದು ಈ ಒಂದು ಹಿನ್ನಲೆಯಲ್ಲಿ ಈ ಮೆಸೆಜ್ ಕಳೆಗೆ ತಮ್ಮ ತಾಲ್ಲೂಕು,ಜಿಲ್ಲೆಯ ಹೆಸರು ನಮೂದಿಸಿ ತಾಲ್ಲೂಕು ಹೆಸರು ಗಳೊಂದಿಗೆ ಮಾಹಿತಿ ನೀಡುವಂತೆ ಸೂಚನೆಯನ್ನು ನೀಡಲಾಗಿದೆ

ತಾಲ್ಲೂಕು,ಜಿಲ್ಲೆಯ ಹೆಸರಿನ ಮುಂದೆ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿ,ಪದಾಧಿಕಾರಿಗಳ,ಪದವೀಧರ ಶಿಕ್ಷಕರ ಹೆಸರು ನಮೂದಿಸಿ ಪಾರ್ವಡ್ ಮಾಡುವಂತೆ ಹೇಳಿದ್ದು ಈ ಒಂದು ಮಾಹಿತಿಯನ್ನು ಕಳಿಸಿದ ನಂತರ ತಲುಪಿದ ಬಳಿಕ ಹೋರಾಟದ ದಿನಾಂಕ ಘೋಷಣೆ ಮಾಡುವ ಮಾತನ್ನು ಸಂಘಟನೆಯ ನಾಯಕರು ಹೇಳಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.