This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

Local News

ಕೊರೊನಾ ಲಸಿಕೆಯನ್ನೇ ಭರವಸೆ ಮಾಡಿಕೊಂಡ ಗ್ರಾಮ ಪಂಚಾಯತ್ ಅಭ್ಯರ್ಥಿ

WhatsApp Group Join Now
Telegram Group Join Now

ಧಾರವಾಡ – ಈಗಾಗಲೇ ದೇಶದ ಜನತೆ ನೇರೆಯ ರಾಷ್ಟ್ರದ ಕರೋನಾ ವೈರಸ್‌ನಿಂದ ಹೈರಾಣಾಗಿ ಹೋಗಿದ್ದಾರೆ. ಅದನ್ನು ಈಗ ಕಟ್ಟಿ ಹಾಕಲು ದೇಶದ ವೈದ್ಯರು ಹಾಗೂ ದೇಶದ ಅರೋಗ್ಯ ಸಚಿವರುಗಳು ಅಷ್ಟೇ ಏಕೆ, ದೇಶದ ಪ್ರಧಾನಿ ಅವರು ಕೂಡಾ ದಿನ ಬೆಳಗಾದರೆ ಯೋಚನೆ ಮಾಡುತ್ತಿದ್ದಾರೆ. ನೇರೆಯ ರಾಷ್ಟ್ರವಾದ ಚೀನಾದಿಂದ ಜನ್ಮ ತಾಳಿರುವ ಕೊರೊನಾ ಮಾಹಾಮಾರಿಗೆ ಈಗಾಗಲೇ ವೈದ್ಯ ಲೋಕವೇ ಇನ್ನೂ ಚಿಕಿತ್ಸೆಯನ್ನು ಕಂಡು ಹಿಡಿಯಲು ಹಗಲು ರಾತ್ರಿ ಶ್ರಮಿಸುತ್ತಿವೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಗ್ರಾಮ ಪಂಚಾಯತಿ ಅಭ್ಯರ್ಥಿಯೊಬ್ಬ ಈಗ ಚುನಾವಣೆ ಭರವಸೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿಕೊಂಡಿಕೊಂಡಿದ್ದಾನೆ. ಕೊವೀಡ್ ಲಸಿಕೆಯನ್ನು ತ್ವರಿತವಾಗಿ ತಮ್ಮಗೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಘೋಷಣೆ ಮಾಡಿಕೊಂಡಿದ್ದಾನೆ.

ಹೌದು ಈ ಮೇಲೆ ಕೊವೀಡ್ ಲಸಿಕೆಯ ಕುರಿತು ಘೋಷಣೆ ಮಾಡಿಕೊಂಡಿರುವ ಗ್ರಾಮ ಪಂಚಾಯತಿ ಅಭ್ಯರ್ಥಿಯ ಹೆಸರು ಇಮಾಮಸಾಹೇಬ ಪಕ್ರುಸಾಬ ನಧಾಫ. ಧಾರವಾಡ ತಾಲೂಕಿನ ಹಾರೋಬೇಳವಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕಬ್ಬೇನೂರ ವಾರ್ಡ ನಂ 1 ರಲ್ಲಿ ಸ್ಪರ್ಧೆ ಮಾಡಿದ್ದಾರೆ. ಆದರೆ ಚುನಾವಣೆಗೆ ಸ್ಪರ್ಧೆ ಮಾಡಿರುವ ಇವರು‌ ತಮ್ಮ ಮತದಾರಿಗೆ ನೀಡುವ ಕರ ಪತ್ರದಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ, ದಕ್ಷ, ಸ್ವಚ್ಚ, ಪ್ರಾಮಾಣಿಕ ಸೇವೆಯೊಂದಿಗೆ ಗ್ರಾಮ ನೈರ್ಮಲ್ಯ ಸೇರಿದಂತೆ ಇನ್ನಿತ್ತರ ಭರವಸೆಗಳಲ್ಲಿ ಕೊವೀಡ್ ಲಸಿಕೆಯನ್ನು ತ್ವರಿತವಾಗಿ ಕೊಡಲು ಶ್ರಮಿಸುತ್ತೇನೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಕುಸೂ ಹುಟ್ಟುವ ಮುಂಚೆ ಕುಲಾಯಿ ಹೋಲಿಸೊಕ್ಕೆ ಹೋಗಿದ್ದಾರೆ ಗ್ರಾಮ ಪಂಚಾಯತಿ ಅಭ್ಯರ್ಥಿ.

ಅಭ್ಯರ್ಥಿ

ಈಗಾಗಲೇ ಜಗತ್ತಿನ ಹಲವು ದೇಶಗಳಲ್ಲಿ ಕೊರೊನಾ ಲಸಿಕೆಯನ್ನು ಕಳೆದ ನಾಲ್ಕೈದು ತಿಂಗಳಿನಿಂದ ಪ್ರಾಯೋಗಿಕವಾಗಿ ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಕೆಲವು ಜನಪ್ರತಿನಿಧಿಗಳು ಇದನ್ನೇ ಬಂಡಿವಾಳ ಮಾಡಿಕೊಂಡು ನಾವು ಕೊವೀಡ್ ಲಸಿಕೆಯನ್ನು ತ್ವರಿತವಾಗಿ ನೀಡುವ ನಿಟ್ಟಿನಲ್ಲಿ ಶ್ರಮವಹಿಸುವುದಾಗಿ ಹೇಳಿಕೊಳ್ಳುತ್ತಿವೆ. ಅಲ್ಲದೆ ಈ ಹಿಂದೆ ಒಂದು ರಾಜಕೀಯ ಪಕ್ಷವು ಇದೇ ರೀತಿ ಹೇಳಿ ಸಾರ್ವಜನಿಕವಾಗಿ ನಗೆಪಾಟಕ್ಕೆ ಇಡಲಾಗಿತ್ತು. ಈಗ ನಮ್ಮ ನಡುವೆಯೇ ಗ್ರಾಮ ಪಂಚಾಯತಿ ಅಭ್ಯರ್ಥಿಯಾದ ಇಮಾಮಸಾಹೇಬ ಅವರು ಕರೋನಾ ಲಸಿಕೆಯನ್ನು ತ್ವರಿತವಾಗಿ ಸಿಗುವಂತೆ ಮಾಡುತ್ತೆನೆ ಹೇಳುವುದರ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಈಗ ಲಸಿಕೆಯ ಕುರಿತು ಹಗಲು ರಾತ್ರಿ ಯೋಚನೆಯಲ್ಲಿ ತೋಡಗಿರುವಾಗ. ಈ ಮಹಾಶಯ ಎಲ್ಲಿಂದ ಚಿಕಿತ್ಸೆಯನ್ನು ತಂದು ತ್ವರಿತವಾಗಿ ನೀಡುತ್ತಾನೋ ಗೋತ್ತಾಗುತ್ತಿಲ್ಲ. ಅಲ್ಲದೆ ಚಿಕಿತ್ಸೆಯ ಲಸಿಕೆಯನ್ನು ಕೊಲ್ಡ್ ಸ್ಟೊರೆಜ್‌ನಲ್ಲಿ ಇಡಬೇಕಾ ಇಂತಷ್ಟು ಕೊಲ್ಡ್ ಇರಬೇಕು ಎನ್ನುವ ಮಾತುಗಳನ್ನು ಈಗಾಗಲೇ ಕೇಳಿ ಬರುತ್ತಿವೆ. ಆದರೆ ಇವರು ಸಂತೆಯಲ್ಲಿ ಲಸಿಕೆ ಸಿಗುವ ರೀತಿಯಲ್ಲಿ ತ್ವರಿತವಾಗಿ ಗ್ರಾಮಸ್ಥರಿಗೆ ಕೊರೊನಾ ಲಸಿಕೆ ನೀಡುವುದಾಗಿ ಹೇಳಿಕೊಂಡಿರುವುದು ಈಗ ಸಾರ್ವಜನಿಕರಲ್ಲಿ ಇಂತಹ ಅಭ್ಯರ್ಥಿಗಳು ನಮ್ಮಲ್ಲಿಯು ಇದ್ದಾರೋ ಎನ್ನುವ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ದೇಶದ ಜನ ಕೊರೊನಾ ಮಾಹಾಮಾರಿಯ ಹೊಡೆತಕ್ಕೆ ಆರ್ಥಿಕವಾಗಿ, ಮಾನಸಿಕವಾಗಿ ತತ್ತರಿಸಿ ಹೋಗಿದ್ದು, ಈಗ ಜನಪ್ರತಿನಿಧಿಗಳು ಆಗುವವರು ಇದನ್ನು ಬಂಡವಾಳ ಮಾಡಿಕೊಳ್ಳುತ್ತರುವುದು ಎಷ್ಟರ ಮಟ್ಟಿಗೆ ಸರಿ ಹೇಳಿ. ಲಸಿಕೆಯನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಎಲ್ಲಿಯು ಯಶಸ್ವಿ ಕಂಡಿಲ್ಲಾ, ಇಂತಹ ಸಂದರ್ಭದಲ್ಲಿ ಈ ಗ್ರಾಮ ಪಂಚಾಯತಿ ಅಭ್ಯರ್ಥಿಯಾಗುವ ಅಭ್ಯರ್ಥಿಗಳು ಕೂಡಾ ಕತ್ತಲೆಯಲ್ಲಿ ಹಗಲು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹವರ ಬುದ್ದಿಗೆ ಅದೇನ ಹೇಳಬೇಕು ಎನ್ನುವುದು ಮತದಾರರೆ ಹೇಳಬೇಕು.


Google News

 

 

WhatsApp Group Join Now
Telegram Group Join Now
Suddi Sante Desk