ಹುಬ್ಬಳ್ಳಿಯಲ್ಲಿ ಮತ್ತೆ ಅಬ್ಬರಿಸಿದ ಮಳೆ ಒರ್ವ ಸಾವು – ಗೋಡೆ ಕುಸಿದು ದರ್ಶನ ಆಸ್ಪತ್ರೆಯಲ್ಲಿ ಕೊನೆಯುಸಿರು…..

Suddi Sante Desk

ಹುಬ್ಬಳ್ಳಿ –

ಮಳೆಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಂದು ಸಾವು ಸಂಭವಿಸಿದೆ.ಹೌದು ನಗರದಲ್ಲಿ ಸುರಿದ ಧಾರಾಕಾರ ಮಹಾ ಮಳೆಗೆ ಯುವಕನೊರ್ವ ಬಲಿಯಾಗಿದ್ದಾನೆ ಗೋಕುಲ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ.

ಧಾರಾಕಾರವಾಗಿ ಸುರಿದ ಮಳೆಗೆ ಹಳೆಯ ಕಟ್ಟಡದ ಗೋಡೆ ಕುಸಿದಿದ್ದು ಕಾರ್ಮಿಕ ಸಾವಿಗೀಡಾಗಿದ್ದಾನೆ ಹೊಸ ಬಸ್ ನಿಲ್ದಾಣ ಬಳಿಯ ಕಟ್ಟಡದಲ್ಲಿ ಈ ಒಂದು ದುರಂತ ಸಂಭವಿಸಿದೆ.ಅಂಡರ್ ಪಾಸ್ ದಲ್ಲಿನ ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿರುವ ಗೋಡೆ ಕುಸಿಯುತ್ತಿತ್ತು ಇದನ್ನು ತಡೆಯಲು ಹೋಗಿದ್ದ ಸಮಯದಲ್ಲಿ ಗೋಡೆ ಕುಸಿದು ಬಿದ್ದಿದೆ.

ದರ್ಶನ ವೀರಾಪೂರ ಮೃತರಾದ ಕಾರ್ಮಿಕ ನಾಗಿದ್ದು ತೀವ್ರವಾಗಿ ಗಾಯಗೊಂಡ ಇವನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು ಆದರೆ ಚಿಕಿತ್ಸೆ ಫಲಸದೇ ಮೃತರಾದರು. ಇನ್ನೂ ಈ ಒಂದು ಸುದ್ದಿ ತಿಳಿದ ಗೋಕುಲ ಪೊಲೀಸ್ ಠಾಣೆ ಯ ಪೊಲೀಸರು ಮತ್ತು ಪಾಲಿಕೆಯ ಸದಸ್ಯ ಚೇತನ ಹಿರೇ ಕೆರೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು‌.ಇತ್ತ ಮೃತ ದರ್ಶನ ಕುಟುಂಬ ದವರ ಆಕ್ರಂದನ ಮುಗಿಲು ಮುಟ್ಟಿದ್ದು ಕಂಡು ಬಂದಿತು.

ಅರ್ಧ ಗಂಟೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಒಂದು ದುರಂತ ಸಂಭವಿಸಿದೆ. ಮೃತ ದರ್ಶನ ಗುಲ್ಬರ್ಗಾ ಮೂಲದವರಾಗಿದ್ದು ಕಾರ್ಮಿಕ ಕೆಲಸ ಮಾಡಲು ನಗರಕ್ಕೆ ಆಗಮಿಸಿದ್ದರು.

ಚಕ್ರವರ್ತಿ ಜೊತೆಗೆ ಮಂಜುನಾಥ್ ಸುದ್ದಿ ಸಂತೆ ನ್ಯೂಸ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.