ಟಿಕೆಟ್ ಘೋಷಣೆ ಮುನ್ನವೇ ಧಾರವಾಡ ದಲ್ಲಿ ಕೈ ಪಕ್ಷದಲ್ಲಿ ಬಂಡಾಯದ ಬಾವುಟ – ಪಕ್ಷದ ಅಭ್ಯರ್ಥಿ ವಿರುದ್ಧ ಬಂಡಾಯದ ಅಭ್ಯರ್ಥಿಯಾದ ಹೇಮಂತ ಗುರ್ಲಹೊಸೂರ…..

Suddi Sante Desk

ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ವಿಚಾರ ಕುರಿತು ಧಾರವಾಡ ದಲ್ಲಿ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ.ಟಿಕೆಟ್ ಘೋಷಣೆ ಮುನ್ನವೇ ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬಾವುಟ ಹಾರಿದೆ.ಹೌದು ಧಾರವಾಡದ ವಾರ್ಡ್ 13 ನೇ ವಾರ್ಡ್ ನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆನಂದ್ ಜಾಧವ್ ಅವರನ್ನು ಕಣಕ್ಕೆ ಇಳಿಸಲಾಗುತ್ತಿದೆ ಇನ್ನೂ ಟಿಕೆಟ್ ನಿರೀಕ್ಷೆಯಲ್ಲಿದ್ದ ಹೇಮಂತ ಗುರ್ಲಹೊಸೂರ ಇವರು ಪಕ್ಷದ ಬಂಡಾಯದ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ‌

ಈಗಾಗಲೇ ಕಳೆದ ಹಲವಾರು ವರ್ಷಗಳಿಂದ ಪಕ್ಷ ನಾಯಕರು ನೀಡಿದ ಕೆಲಸ ಕಾರ್ಯಗಳನ್ನು ಚಾಚು ತಪ್ಪದೆ ಮಾಡಿಕೊಂಡು ಬರುತ್ತಿದ್ದು ನಿಷ್ಠಾವಂತ ರಾಗಿದ್ದಾರೆ‌.ಹೀಗಿರುವಾಗ ಇವರ ಬದಲಿಗೆ ಬೇರೆ ಯವರಿಗೆ ಟಿಕೆಟ್ ನೀಡುತ್ತಿದ್ದು ಹೀಗಾಗಿ ಟಿಕೆಟ್ ಘೋಷಣೆ ಮುನ್ನವೇ ಬಂಡಾಯದ ಬಾವುಟ ಹಾರಿಸಿದ್ದಾರೆ

13 ನೇ ವಾರ್ಡ್ ನಿಂದ ಬಂಡಾಯದ ಅಭ್ಯರ್ಥಿ ಯಾಗಿ ನಾಳೆ ನಾಮಪತ್ರವನ್ನು ಸಲ್ಲಿಸಲಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.