ಧಾರವಾಡ –
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಧಾರವಾಡ ನಗರದ ಹಿರಿಯ ವೈದ್ಯ ಡಾ.ಎಸ್.ಆರ್.ರಾಮನಗೌಡರ ಅವರನ್ನು ಗಣ್ಯರು ಅವರ ಮನೆಯಲ್ಲಿ ಶಾಲು ಹಾಕಿ ಸಿಹಿ ತಿನಿಸಿ ಸನ್ಮಾನಿಸಿದರು.
ಹೌದು ಅತ್ತ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಇತ್ತ ಧಾರವಾಡ ದಲ್ಲಿ ಇವರಿಗೆ ನಿವಾಸದಲ್ಲಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಶಾಸಕ ಅಮೃತ ದೇಸಾಯಿ ಮಾತನಾಡಿ
ಡಾ.ರಾಮನಗೌಡರ ಅವರು ಪರಿಣಿತ ವೈದ್ಯರಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜನಸೇವೆಯಲ್ಲಿ ತೊಡಗಿದ್ದಾರೆ. ಹಲವಾರು ಸಂಘ- ಸಂಸ್ಥೆಗಳ ಪದಾಧಿಕಾರಿಯಾಗಿ ಕ್ರಿಯಾ ಶೀಲರಾಗಿದ್ದಾರೆ.ಧಾರ್ಮಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು ಇತರರಿಗೆ ಆದರ್ಶಪ್ರಾಯ ರಾಗಿದ್ದಾರೆ.ತಮ್ಮ ಸಮಾಜಮುಖಿ ಕೆಲಸಗಳಿಂದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಸರಳ-ಸಜ್ಜನ ವ್ಯಕ್ತಿತ್ವದ ಡಾ.ರಾಮನಗೌಡರ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಉಂಟು ಮಾಡಿದ್ದು ಈ ಒಂದು ಸಮಯದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಈರೇಶ ಅಂಚಟಗೇರಿ,ಹಿರಿಯರಾದ ಸಿ.ಎಸ್. ಪಾಟೀಲ, ರಾಜಶೇ ಖರ ಬೆಳ್ಳಕ್ಕಿ,ಬಸವರಾಜ ಕೌಜಲಗಿ,ಸುನೀಲ ಮೋರೆ, ಬಸವರಾಜ ಶಿರೋಳ, ಟಿ.ಕೆ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.